ಜ್ಯೋತಿಷ್ಯದ ಬಗ್ಗೆ ಚಕ್ರವರ್ತಿ ಸೂಲಿಬೆಲೆಯವರ ಲೇಖನ ಓದಿ #ನನಗನಿಸಿದ್ದು
ಗ್ರಹಗಳು ಮನುಷ್ಯನ ಮೇಲೆ ಎಷ್ಟರಮಟ್ಟಿಗೆ ಪ್ರಭಾವ ಬೀರುತ್ತವೆ ಅಥವಾ ಬೀರುತ್ತವೆಯಾ? ಜ್ಯೋತಿಷ್ಯಶಾಸ್ತ್ರವನ್ನು ಅವರು Data analysis ಗೆ ಹೋಲಿಸಿ ಬರೆದಿದ್ದಾರೆ. ಹೌದು , ವಿಜ್ಞಾನದ ಕನ್ನಡಕದಲ್ಲೇ ಈ ವಿಷಯವನ್ನು ನೋಡೋಣ, google ಹೇಗೆ ಕೆಲಸ ಮಾಡುತ್ತದೆ ಎಂದು ಒಮ್ಮೆ ಅರಿಯೋಣ,
Googleನಲ್ಲಿ banks ಎಂದು ಬರೆದರೆ ಅದು banks in india, banks wages, banks jobs ಹೀಗೆ ತಾನಾಗಿಯೇ ಊಹಿಸಿ ನಮಗೆ ನಮ್ಮ ಹುಡುಕಾಟವನ್ನು ಸರಳಗೊಳಿಸುತ್ತದೆ. ಅಂಕಿಅಂಶಗಳ ಪ್ರಕಾರ ಅದರ ಊಹೆ ಪ್ರತಿಶತ 80ರಷ್ಟು ಸರಿಯಾಗಿಯೇ ಇರುತ್ತದೆ. ಒಂದು ಯಂತ್ರ ನಮ್ಮ ಮನಸ್ಸಿನಲ್ಲಿರುವುದನ್ನು ಹೇಗೆ ಊಹಿಸಿತು? ಇದು ಸಾಧ್ಯವಾದದ್ದು data analysis ಇಂದ.
Google ಪ್ರಪಂಚದ ಎಲ್ಲಾ ಹುಡುಕಾಟಗಳ ಅಂಕಿ ಅಂಶವನ್ನು ಇಟ್ಟು ಕೊಂಡು, ಹೆಚ್ಚು ಹುಡುಕಾಟ ಯಾವುದಾಗಿರುತ್ತದೆಯೋ ಅದನ್ನು ನಮಗೆ ತೋರಿಸುತ್ತದೆ. ಅಲ್ಲದೇ ಅದು ಹುಡುಕಾಟದ ಕ್ಷೇತ್ರದ ಮೇಲೂ ಅಂದರೆ Geo location ಮೇಲೂ ನಿರ್ಧರಿಸುವಷ್ಟು ಜಾಣ್ಮೆಯನ್ನು "ಮನುಷ್ಯ ತನ್ನ algorithm ಮೂಲಕ computer ಗೆ ಉಣಬಡಿಸಿದ್ದಾನೆ. ಮೇಲಿನ banks ಎಂದು ಅಮೇರಿಕಾದ computer ಲಿ ಬರೆದರೆ banks of America ಎಂದು ತೋರಿಸಿ ಬಹುದು. ಒಬ್ಬ ಮನುಷ್ಯನ ಮನಸ್ಸನ್ನು ಮಾನವ ನಿರ್ಮಿತ ಯಂತ್ರ ಅಳೆದರೆ ಮನುಷ್ಯನ ಕೈಯಲ್ಲಿ ಯಾಕೆ ಸಾಧ್ಯವಿಲ್ಲ? ಹೇಳಬೇಕೆಂದರೆ ಮನುಷ್ಯ ಊಹಿಸುವುದಲ್ಲಾ ನಿಖರವಾಗಿ ಹೇಳಬಹುದು.
ನಮ್ಮ ಋಷಿಮುನಿಗಳ ಜ್ಯೋತಿಷ್ಯಶಾಸ್ತ್ರದಲ್ಲಿ ಇದೆಲ್ಲಾ ಸಾಧ್ಯವಾಗುತ್ತದೆ. Google ಮಾಡಿದ data analysis ಅನ್ನು ಋಷಿಗಳು ಸಾವಿರಾರು ವರ್ಷಗಳ ಹಿಂದೆ ಮನುಷ್ಯನ ಮೇಲೆ, ಗ್ರಹಗಳ, ಸೂರ್ಯನ, ಚಂದ್ರನ ಪರಿಣಾಮಗಳ ಮೇಲೆ ಮಾಡಿ ನಮಗೆ ಜ್ಯೋತಿಷ್ಯಶಾಸ್ತ್ರದ ಕೊಡುಗೆ ನೀಡಿದ್ದಾರೆ.
ಇನ್ನು ಅಲ್ಪರಾದ ನಮಗೆ ಅನುಭವವಾಗುವ ಕೆಲ ಪರಿಣಾಮಗಳನ್ನು ಗಮನಿಸೋಣ. ಕತ್ತಲಾದ ಮೇಲೆ ಎಲ್ಲೋ ಮೂಲೆಯಲ್ಲಿ ಭಯ, ಆತಂಕ ಮನೆ ಮಾಡುತ್ತದೆ ಏಕೆ? ಎಷ್ಟೇ ಪ್ರಯತ್ನ ಪಟ್ಟರೂ ರಾತ್ರಿಯ ವೇಳೆ ನಿದ್ರೆಯಿಂದ ಎಚ್ಚರವಿರಲು ಸಾಧ್ಯವಿಲ್ಲ, ಅಥವ ಎಚ್ಚರವಿದ್ದರೂ ಮನಸ್ಸು ಉಲ್ಲಾಸದಿಂದಿರಲು ಸಾಧ್ಯವಿಲ್ಲ, ಹಾಗೇ ಉದಯಕಾಲದ ಹೊಸತನ ಮಧ್ಯಾಹ್ನದ ವೇಳೆ ಇರುವುದಿಲ್ಲ. ಇದಕ್ಕೆಲ್ಲಾ ಒಂದು ಅಂಶ ಕಾರಣವಿರಬಹುದು, ಅದೇ ಸೂರ್ಯನ ಇರುವಿಕೆ. ಸೂರ್ಯನಿಲ್ಲದಿದ್ದರೆ ಅಥವ ಸೂರ್ಯ ಭೂಮಿಗೆ ಯಾವ ಕೋನದಲ್ಲಿದ್ದರೆ ಯಾವ ಯಾವ ಪರಿಣಾಮವಾಗುತ್ತದೆಂದು ಗಮನಿಸಬಹುದು.
ಚಂದ್ರ, ಉತ್ತಮ ಉದಾಹರಣೆ ಪೂರ್ಣ ಚಂದ್ರ ಪ್ರೇಮಿಗಳಲ್ಲಿ ಮಾಡುವ ಬದಲಾವಣೆ(ಕೇಳಿದ್ದು, ನೋಡಿದ್ದು) , ಸಾಗರದ ಅಲೆಗಳಲ್ಲಿ ಏರಿಳಿತಗಳ ಬದಲಾವಣೆ.
ನಕ್ಷತ್ರವಾದ( ವಿಙ್ಞಾನದ ಪ್ರಕಾರ) ಸೂರ್ಯ ಹಾಗು ಉಪಗ್ರಹವಾದ ಚಂದ್ರನಿಂದ ಇಷ್ಟೊಂದು ಪರಿಣಾಮಗಳು ನಮ್ಮ ಅಲ್ಪಾನುಭವಕ್ಕೆ ಬಂದರೆ, ಅವೆರಡರ ಮಧ್ಯ ಬರುವ ಗ್ರಹಗಳೂ ಕೂಡ ಪರಿಣಾಮ ಬೀರಬಹುದಲ್ಲವೇ, ಇದೇ ಒಂದು ರೀತಿಯ data analysis.
ನಂತರ ಅವುಗಳ ಶಕ್ತಿ(intensity of radiations or gravity) , ನಮ್ಮ ಭೂಮಿಗೆ ಅವುಗಳ ಕೋನ ಇವುಗಳನ್ನೆಲ್ಲಾ ಅಧ್ಯಯನ ಮಾಡಿ ತಿಳಿಯುತ್ತಿದ್ದ ಋಷಿಗಳು ಸಾವಿರಾರು ಜನರ ಮೇಲೆ ಮಾಡಿದ ಏರುಪೇರುಗಳನ್ನೆಲ್ಲಾ ಒಂದಟ್ಟಿಗೆ ಹಾಕಿ(collection of data) data analysis ಇಂದ ಹೊರಬಂದಿರುವುದೇ ಜ್ಯೋತಿಷ್ಯಶಾಸ್ತ್ರ.
ಹಾಗಾದರೆ, ಈ ಜ್ಯೋತಿಷ್ಯಶಾಸ್ತ್ರ ಸುಳ್ಳಾದ ಉದಾಹರಣೆಗಳೇ ಹೆಚ್ಚು ಏಕೆ? ಉತ್ತರ ಬಹಳ ಸುಲಭ. ಸರಿಯಾಗಿ ಅಧ್ಯಯನ ಮಾಡಿದ ಜ್ಯೋತಿಷಿಗಳು ಬೆರಳೆಣಿಕೆ ಮಾತ್ರ. ಅವರ ಜ್ಯೋತಿಷ್ಯ ಕೂಡ ಸುಳ್ಳಾಗಬಹುದು ನಾವು ಕೊಟ್ಟ data ತಪ್ಪಿದ್ದರೆ. ಹಾಗಾಗಿ ಜ್ಯೋತಿಷ್ಯ ಸತ್ಯ. ಆದರೆ ಇಂದಿನ ಪರಿಸ್ಥಿತಿಗೆ ಅದು ಮಾರಾಟದ ಅಥವ ಪ್ರಚಾರದ ವಸ್ತುವಾಗಿದೆ.
Atomic bomb ವಿಙ್ಞಾನದ ದುರುಪಯೋಗವಲ್ಲವೇ , ಇದರಿಂದ ವಿಙ್ಞಾನವೇ ಅಪಾಯಕಾರಿ ಎಂಬ ತೀರ್ಮಾನ ಒಪ್ಪುವಂತದಲ್ಲ. ಹಾಗೇ ಜ್ಯೋತಿಷ್ಯ ಎಷ್ಟೋ ಜನರ ಹೊಟ್ಟೆಪಾಡಾಗಿರಬಹುದು, ಅದಕ್ಕಾಗಿ ಸಾಕಷ್ಟು ಮೋಸಗಳನ್ನು ಮಾಡಿರಬಹುದು. ಅದು ಏಕೆ ದುರುಪಯೋಗ ಎನ್ನಿಸಿಕೊಳ್ಳುವುದಿಲ್ಲ? ಅದನ್ನು ಮಾತ್ರ ಸುಳ್ಳು ಎಂಬ ತೀರ್ಮಾನಕ್ಕೆ ತಿರುಗುವುದು ಏಕೆ? ಉತ್ತರ ನಾವು ಹಾಕಿಕೊಂಡು ನೋಡುತ್ತಿರುವ ಕನ್ನಡಕ.
ಆ ಕನ್ನಡಕ ಹಾಕಿಕೊಂಡು ಜ್ಯೋತಿಷ್ಯವನ್ನು ಅಣುಕಿಸಿ ಸಾಕಷ್ಟು ಚಿತ್ರಗಳು ಕೂಡ ಬಂದಿದೆ. ಜ್ಯೋತಿಷಿಗಳು ತಮ್ಮ ಬದುಕನ್ನೇ ನಿರ್ಧರಿಸಲು ಸಾಧ್ಯವಿಲ್ಲ ಇನ್ನು ಬೇರೆಯವರ ಭವಿಷ್ಯ ಹೇಗೆ ಹೇಳುತ್ತಾನೆ ಎಂಬ ಗೇಲಿ ಇರುತ್ತದೆ. ಇದಕ್ಕೆ ಉತ್ತರ ಮೇಲೆ ಹೇಳಿದ ವಿಷಯ ಒಂದಾದರೆ, contradictory ಕೆಲವು ಉದಾಹರಣೆ ನೋಡೋಣ.
1. ಪರಾಶರು ತಮ್ಮ ಜ್ಯೋತಿಷ್ಯ ಜ್ಞಾನದಿಂದ ಮಹಾ ಸಂತಾನ ವೇದವ್ಯಾಸರಿಗೆ ಜನ್ಮ ಕೊಟ್ಟಿಲ್ಲವೇ(ಹುಟ್ಟು ಸಾವಿಲ್ಲದ ವಿಷ್ಣುವಿನ ಅವತಾರವಾದರೂ ನಮ್ಮಂಥ ಹುಲುಮಾನವರಿಗೆ ಅರಿವಾಗಲೆಂದು ಜನ್ಮ ತಾಳಿದರು ಎನ್ನಬಹುದು)
2. ಸಂಧ್ಯಾಸಮಯದಲ್ಲಿ ಅಥವಾ ನಿರ್ಧಿಷ್ಟ ಸಮಯದಲ್ಲಿ ಮಿಲನದಿಂದಾದ ಮಕ್ಕಳು ರಾಕ್ಷಸರಾಗುತ್ತಾರೆಂದು ಕಷ್ಯಪರು ಹೇಗೆ ತಿಳಿದಿದ್ದರು?
3. ಗಾಂಧಾರಿಗೆ ತನ್ನ ಸಂತಾನ ದುಷ್ಟಬುದ್ಧಿಯವನು ಎಂದು ತಿಳಿದಿರಲಿಲ್ಲವೇ?
4. ಕಲಿಯುಗದಲ್ಲೂ ವ್ಯಾಸರಾಜರು ಪುರಂದರದಾಸರ, ಕನಕದಾಸರ ಆಗಮನದ ಬಗ್ಗೆ ಹಾಗೂ ಅವರ ಪೂರ್ವ ಅವತಾರದ ಬಗ್ಗೆ ತಿಳಿದವರಾಗಿದ್ದರು.
5. ಕೋಡಿ ಮಠದ ಎಷ್ಟೋ ಭವಿಷ್ಯ ನಿಜವಾಗಿದೆ.
ಭವಿಷ್ಯವನ್ನರಿತು ತಮ್ಮನ್ನು ತಾವು ಸುಧಾರಿಸಿಕೊಂಡವರು ತುಂಬಾ ಜನರಿದ್ದಾರೆ.
ಹಾಗಾಗಿ ಕೊನೆಯದಾಗಿ ನನ್ನ ಅಭಿಪ್ರಾಯ
ಜ್ಯೋತಿಷ್ಯ ಸತ್ಯ, ಆದರೆ ಅದನ್ನು ಅರಿಯುವ ಸಾಹಸ ಬೇಡ. ಭಗವದ್ಗೀತೆಯಲ್ಲಿ ಹೇಳಿದಂತೆ
ಕರ್ಮಣ್ಯೇವಾಧಿಕಾರಸ್ತೇ ಮಾ ಫಲೇಷು ಕದಾ ಚನ
ಮಾ ಕರ್ಮಫಲಹೇತುರ್ಭೋ ಮಾ ತೇ ಸಂಗೋsಸ್ತ್ವ ಕರ್ಮಣಿ
ನಮ್ಮ ಕೆಲಸ ನಾವು ಮಾಡೋಣ. ಫಲಾಫಲಗಳನ್ನು ಕೊಡುವ ಜವಾಬ್ದಾರಿ ಭಗವಂತನದು. ಭಗವಂತ ಅತಿ ದೊಡ್ಡ data analyst. ಅವನ ಬಳಿ ಜಗತ್ತಿನ ಪ್ರತಿಯೊಂದು data ಇದೆ, infact ಜಗದುದರ. ನಮ್ಮ data ಅಂದರೆ ಪೂರ್ವಕರ್ಮಗಳ ತುಲನೆ ಮಾಡಿ ಫಲ ಕೊಡುವುದಂತು ನಿಜ..
ಗ್ರಹಗಳು ಮನುಷ್ಯನ ಮೇಲೆ ಎಷ್ಟರಮಟ್ಟಿಗೆ ಪ್ರಭಾವ ಬೀರುತ್ತವೆ ಅಥವಾ ಬೀರುತ್ತವೆಯಾ? ಜ್ಯೋತಿಷ್ಯಶಾಸ್ತ್ರವನ್ನು ಅವರು Data analysis ಗೆ ಹೋಲಿಸಿ ಬರೆದಿದ್ದಾರೆ. ಹೌದು , ವಿಜ್ಞಾನದ ಕನ್ನಡಕದಲ್ಲೇ ಈ ವಿಷಯವನ್ನು ನೋಡೋಣ, google ಹೇಗೆ ಕೆಲಸ ಮಾಡುತ್ತದೆ ಎಂದು ಒಮ್ಮೆ ಅರಿಯೋಣ,
Googleನಲ್ಲಿ banks ಎಂದು ಬರೆದರೆ ಅದು banks in india, banks wages, banks jobs ಹೀಗೆ ತಾನಾಗಿಯೇ ಊಹಿಸಿ ನಮಗೆ ನಮ್ಮ ಹುಡುಕಾಟವನ್ನು ಸರಳಗೊಳಿಸುತ್ತದೆ. ಅಂಕಿಅಂಶಗಳ ಪ್ರಕಾರ ಅದರ ಊಹೆ ಪ್ರತಿಶತ 80ರಷ್ಟು ಸರಿಯಾಗಿಯೇ ಇರುತ್ತದೆ. ಒಂದು ಯಂತ್ರ ನಮ್ಮ ಮನಸ್ಸಿನಲ್ಲಿರುವುದನ್ನು ಹೇಗೆ ಊಹಿಸಿತು? ಇದು ಸಾಧ್ಯವಾದದ್ದು data analysis ಇಂದ.
Google ಪ್ರಪಂಚದ ಎಲ್ಲಾ ಹುಡುಕಾಟಗಳ ಅಂಕಿ ಅಂಶವನ್ನು ಇಟ್ಟು ಕೊಂಡು, ಹೆಚ್ಚು ಹುಡುಕಾಟ ಯಾವುದಾಗಿರುತ್ತದೆಯೋ ಅದನ್ನು ನಮಗೆ ತೋರಿಸುತ್ತದೆ. ಅಲ್ಲದೇ ಅದು ಹುಡುಕಾಟದ ಕ್ಷೇತ್ರದ ಮೇಲೂ ಅಂದರೆ Geo location ಮೇಲೂ ನಿರ್ಧರಿಸುವಷ್ಟು ಜಾಣ್ಮೆಯನ್ನು "ಮನುಷ್ಯ ತನ್ನ algorithm ಮೂಲಕ computer ಗೆ ಉಣಬಡಿಸಿದ್ದಾನೆ. ಮೇಲಿನ banks ಎಂದು ಅಮೇರಿಕಾದ computer ಲಿ ಬರೆದರೆ banks of America ಎಂದು ತೋರಿಸಿ ಬಹುದು. ಒಬ್ಬ ಮನುಷ್ಯನ ಮನಸ್ಸನ್ನು ಮಾನವ ನಿರ್ಮಿತ ಯಂತ್ರ ಅಳೆದರೆ ಮನುಷ್ಯನ ಕೈಯಲ್ಲಿ ಯಾಕೆ ಸಾಧ್ಯವಿಲ್ಲ? ಹೇಳಬೇಕೆಂದರೆ ಮನುಷ್ಯ ಊಹಿಸುವುದಲ್ಲಾ ನಿಖರವಾಗಿ ಹೇಳಬಹುದು.
ನಮ್ಮ ಋಷಿಮುನಿಗಳ ಜ್ಯೋತಿಷ್ಯಶಾಸ್ತ್ರದಲ್ಲಿ ಇದೆಲ್ಲಾ ಸಾಧ್ಯವಾಗುತ್ತದೆ. Google ಮಾಡಿದ data analysis ಅನ್ನು ಋಷಿಗಳು ಸಾವಿರಾರು ವರ್ಷಗಳ ಹಿಂದೆ ಮನುಷ್ಯನ ಮೇಲೆ, ಗ್ರಹಗಳ, ಸೂರ್ಯನ, ಚಂದ್ರನ ಪರಿಣಾಮಗಳ ಮೇಲೆ ಮಾಡಿ ನಮಗೆ ಜ್ಯೋತಿಷ್ಯಶಾಸ್ತ್ರದ ಕೊಡುಗೆ ನೀಡಿದ್ದಾರೆ.
ಇನ್ನು ಅಲ್ಪರಾದ ನಮಗೆ ಅನುಭವವಾಗುವ ಕೆಲ ಪರಿಣಾಮಗಳನ್ನು ಗಮನಿಸೋಣ. ಕತ್ತಲಾದ ಮೇಲೆ ಎಲ್ಲೋ ಮೂಲೆಯಲ್ಲಿ ಭಯ, ಆತಂಕ ಮನೆ ಮಾಡುತ್ತದೆ ಏಕೆ? ಎಷ್ಟೇ ಪ್ರಯತ್ನ ಪಟ್ಟರೂ ರಾತ್ರಿಯ ವೇಳೆ ನಿದ್ರೆಯಿಂದ ಎಚ್ಚರವಿರಲು ಸಾಧ್ಯವಿಲ್ಲ, ಅಥವ ಎಚ್ಚರವಿದ್ದರೂ ಮನಸ್ಸು ಉಲ್ಲಾಸದಿಂದಿರಲು ಸಾಧ್ಯವಿಲ್ಲ, ಹಾಗೇ ಉದಯಕಾಲದ ಹೊಸತನ ಮಧ್ಯಾಹ್ನದ ವೇಳೆ ಇರುವುದಿಲ್ಲ. ಇದಕ್ಕೆಲ್ಲಾ ಒಂದು ಅಂಶ ಕಾರಣವಿರಬಹುದು, ಅದೇ ಸೂರ್ಯನ ಇರುವಿಕೆ. ಸೂರ್ಯನಿಲ್ಲದಿದ್ದರೆ ಅಥವ ಸೂರ್ಯ ಭೂಮಿಗೆ ಯಾವ ಕೋನದಲ್ಲಿದ್ದರೆ ಯಾವ ಯಾವ ಪರಿಣಾಮವಾಗುತ್ತದೆಂದು ಗಮನಿಸಬಹುದು.
ಚಂದ್ರ, ಉತ್ತಮ ಉದಾಹರಣೆ ಪೂರ್ಣ ಚಂದ್ರ ಪ್ರೇಮಿಗಳಲ್ಲಿ ಮಾಡುವ ಬದಲಾವಣೆ(ಕೇಳಿದ್ದು, ನೋಡಿದ್ದು) , ಸಾಗರದ ಅಲೆಗಳಲ್ಲಿ ಏರಿಳಿತಗಳ ಬದಲಾವಣೆ.
ನಕ್ಷತ್ರವಾದ( ವಿಙ್ಞಾನದ ಪ್ರಕಾರ) ಸೂರ್ಯ ಹಾಗು ಉಪಗ್ರಹವಾದ ಚಂದ್ರನಿಂದ ಇಷ್ಟೊಂದು ಪರಿಣಾಮಗಳು ನಮ್ಮ ಅಲ್ಪಾನುಭವಕ್ಕೆ ಬಂದರೆ, ಅವೆರಡರ ಮಧ್ಯ ಬರುವ ಗ್ರಹಗಳೂ ಕೂಡ ಪರಿಣಾಮ ಬೀರಬಹುದಲ್ಲವೇ, ಇದೇ ಒಂದು ರೀತಿಯ data analysis.
ನಂತರ ಅವುಗಳ ಶಕ್ತಿ(intensity of radiations or gravity) , ನಮ್ಮ ಭೂಮಿಗೆ ಅವುಗಳ ಕೋನ ಇವುಗಳನ್ನೆಲ್ಲಾ ಅಧ್ಯಯನ ಮಾಡಿ ತಿಳಿಯುತ್ತಿದ್ದ ಋಷಿಗಳು ಸಾವಿರಾರು ಜನರ ಮೇಲೆ ಮಾಡಿದ ಏರುಪೇರುಗಳನ್ನೆಲ್ಲಾ ಒಂದಟ್ಟಿಗೆ ಹಾಕಿ(collection of data) data analysis ಇಂದ ಹೊರಬಂದಿರುವುದೇ ಜ್ಯೋತಿಷ್ಯಶಾಸ್ತ್ರ.
ಹಾಗಾದರೆ, ಈ ಜ್ಯೋತಿಷ್ಯಶಾಸ್ತ್ರ ಸುಳ್ಳಾದ ಉದಾಹರಣೆಗಳೇ ಹೆಚ್ಚು ಏಕೆ? ಉತ್ತರ ಬಹಳ ಸುಲಭ. ಸರಿಯಾಗಿ ಅಧ್ಯಯನ ಮಾಡಿದ ಜ್ಯೋತಿಷಿಗಳು ಬೆರಳೆಣಿಕೆ ಮಾತ್ರ. ಅವರ ಜ್ಯೋತಿಷ್ಯ ಕೂಡ ಸುಳ್ಳಾಗಬಹುದು ನಾವು ಕೊಟ್ಟ data ತಪ್ಪಿದ್ದರೆ. ಹಾಗಾಗಿ ಜ್ಯೋತಿಷ್ಯ ಸತ್ಯ. ಆದರೆ ಇಂದಿನ ಪರಿಸ್ಥಿತಿಗೆ ಅದು ಮಾರಾಟದ ಅಥವ ಪ್ರಚಾರದ ವಸ್ತುವಾಗಿದೆ.
Atomic bomb ವಿಙ್ಞಾನದ ದುರುಪಯೋಗವಲ್ಲವೇ , ಇದರಿಂದ ವಿಙ್ಞಾನವೇ ಅಪಾಯಕಾರಿ ಎಂಬ ತೀರ್ಮಾನ ಒಪ್ಪುವಂತದಲ್ಲ. ಹಾಗೇ ಜ್ಯೋತಿಷ್ಯ ಎಷ್ಟೋ ಜನರ ಹೊಟ್ಟೆಪಾಡಾಗಿರಬಹುದು, ಅದಕ್ಕಾಗಿ ಸಾಕಷ್ಟು ಮೋಸಗಳನ್ನು ಮಾಡಿರಬಹುದು. ಅದು ಏಕೆ ದುರುಪಯೋಗ ಎನ್ನಿಸಿಕೊಳ್ಳುವುದಿಲ್ಲ? ಅದನ್ನು ಮಾತ್ರ ಸುಳ್ಳು ಎಂಬ ತೀರ್ಮಾನಕ್ಕೆ ತಿರುಗುವುದು ಏಕೆ? ಉತ್ತರ ನಾವು ಹಾಕಿಕೊಂಡು ನೋಡುತ್ತಿರುವ ಕನ್ನಡಕ.
ಆ ಕನ್ನಡಕ ಹಾಕಿಕೊಂಡು ಜ್ಯೋತಿಷ್ಯವನ್ನು ಅಣುಕಿಸಿ ಸಾಕಷ್ಟು ಚಿತ್ರಗಳು ಕೂಡ ಬಂದಿದೆ. ಜ್ಯೋತಿಷಿಗಳು ತಮ್ಮ ಬದುಕನ್ನೇ ನಿರ್ಧರಿಸಲು ಸಾಧ್ಯವಿಲ್ಲ ಇನ್ನು ಬೇರೆಯವರ ಭವಿಷ್ಯ ಹೇಗೆ ಹೇಳುತ್ತಾನೆ ಎಂಬ ಗೇಲಿ ಇರುತ್ತದೆ. ಇದಕ್ಕೆ ಉತ್ತರ ಮೇಲೆ ಹೇಳಿದ ವಿಷಯ ಒಂದಾದರೆ, contradictory ಕೆಲವು ಉದಾಹರಣೆ ನೋಡೋಣ.
1. ಪರಾಶರು ತಮ್ಮ ಜ್ಯೋತಿಷ್ಯ ಜ್ಞಾನದಿಂದ ಮಹಾ ಸಂತಾನ ವೇದವ್ಯಾಸರಿಗೆ ಜನ್ಮ ಕೊಟ್ಟಿಲ್ಲವೇ(ಹುಟ್ಟು ಸಾವಿಲ್ಲದ ವಿಷ್ಣುವಿನ ಅವತಾರವಾದರೂ ನಮ್ಮಂಥ ಹುಲುಮಾನವರಿಗೆ ಅರಿವಾಗಲೆಂದು ಜನ್ಮ ತಾಳಿದರು ಎನ್ನಬಹುದು)
2. ಸಂಧ್ಯಾಸಮಯದಲ್ಲಿ ಅಥವಾ ನಿರ್ಧಿಷ್ಟ ಸಮಯದಲ್ಲಿ ಮಿಲನದಿಂದಾದ ಮಕ್ಕಳು ರಾಕ್ಷಸರಾಗುತ್ತಾರೆಂದು ಕಷ್ಯಪರು ಹೇಗೆ ತಿಳಿದಿದ್ದರು?
3. ಗಾಂಧಾರಿಗೆ ತನ್ನ ಸಂತಾನ ದುಷ್ಟಬುದ್ಧಿಯವನು ಎಂದು ತಿಳಿದಿರಲಿಲ್ಲವೇ?
4. ಕಲಿಯುಗದಲ್ಲೂ ವ್ಯಾಸರಾಜರು ಪುರಂದರದಾಸರ, ಕನಕದಾಸರ ಆಗಮನದ ಬಗ್ಗೆ ಹಾಗೂ ಅವರ ಪೂರ್ವ ಅವತಾರದ ಬಗ್ಗೆ ತಿಳಿದವರಾಗಿದ್ದರು.
5. ಕೋಡಿ ಮಠದ ಎಷ್ಟೋ ಭವಿಷ್ಯ ನಿಜವಾಗಿದೆ.
ಭವಿಷ್ಯವನ್ನರಿತು ತಮ್ಮನ್ನು ತಾವು ಸುಧಾರಿಸಿಕೊಂಡವರು ತುಂಬಾ ಜನರಿದ್ದಾರೆ.
ಹಾಗಾಗಿ ಕೊನೆಯದಾಗಿ ನನ್ನ ಅಭಿಪ್ರಾಯ
ಜ್ಯೋತಿಷ್ಯ ಸತ್ಯ, ಆದರೆ ಅದನ್ನು ಅರಿಯುವ ಸಾಹಸ ಬೇಡ. ಭಗವದ್ಗೀತೆಯಲ್ಲಿ ಹೇಳಿದಂತೆ
ಕರ್ಮಣ್ಯೇವಾಧಿಕಾರಸ್ತೇ ಮಾ ಫಲೇಷು ಕದಾ ಚನ
ಮಾ ಕರ್ಮಫಲಹೇತುರ್ಭೋ ಮಾ ತೇ ಸಂಗೋsಸ್ತ್ವ ಕರ್ಮಣಿ
ನಮ್ಮ ಕೆಲಸ ನಾವು ಮಾಡೋಣ. ಫಲಾಫಲಗಳನ್ನು ಕೊಡುವ ಜವಾಬ್ದಾರಿ ಭಗವಂತನದು. ಭಗವಂತ ಅತಿ ದೊಡ್ಡ data analyst. ಅವನ ಬಳಿ ಜಗತ್ತಿನ ಪ್ರತಿಯೊಂದು data ಇದೆ, infact ಜಗದುದರ. ನಮ್ಮ data ಅಂದರೆ ಪೂರ್ವಕರ್ಮಗಳ ತುಲನೆ ಮಾಡಿ ಫಲ ಕೊಡುವುದಂತು ನಿಜ..