ಉಪ್ಪಿ2 ಚಿತ್ರ ನೋಡಿ #ನನಗನಿಸಿದ್ದು:
ಎಂದಿನಂತೆ ಅರ್ಥವಾಗದ ಹಾಗೆ ದೊಡ್ಡ ಫಿಲಾಸಫಿಯನ್ನು ಪಕ್ಕ ಲೋಕಲ್ ಸ್ಟಯ್ಲಲ್ಲಿ ಹೇಳಲು ಹೋಗಿ, ಉಪ್ಪಿಲ್ಲದ(ಕಥೆ) ಉಪ್ಪಿಟ್ಟು ಕೊಟ್ಟಿದ್ದಾರೆ ಉಪೇಂದ್ರ. ಉಪ್ಪಿಗಿಂತ ರುಚಿ ಇಲ್ಲ ಎಂದು ಹಾಡಿದವರೇ ಉಪ್ಪು ಹಾಕುವುದು ಮರೆತ ಹಾಗಿದೆ. ಅರ್ಥವಾಗದ ಹಾಗೆ ಚಿತ್ರ ಮಾಡುವುದು ಬುದ್ದಿವಂತಿಕೆ ಎನ್ನುವುದಾದರೆ ಈ ಚಿತ್ರ ಒ.ಕೆ.
ಫಿಲಾಸಫಿಯನ್ನು ಸುಂದರವಾಗಿ ಅರ್ಥವಾಗುವ ಹಾಗೆ ಹೇಳಿದರೆ ಒಳ್ಳೆಯದು ಎಂದು ನನ್ನ ಅಭಿಪ್ರಾಯ. ಅರಿಷಡ್ವರ್ಗಗಳ ಹತೋಟಿ ಬಗ್ಗೆ ಎಡಕಲ್ಲು ಗುಡ್ಡದ ಮೇಲೆ, ಧರಣಿ ಮಂಡಲ ಮಧ್ಯದೊಳಗೆ ಹೀಗೆ ಪುಟ್ಟಣ್ಣನವರು ತೋರಿಸಿಕೊಟ್ಟಿದ್ದಾರೆ. ಆದರೆ ಈರೀತಿ ತಿಕ್ಕುಲುತನ ಎಲ್ಲೂ ಕಂಡುಬಂದಿಲ್ಲ. ಇನ್ನು ಪ್ರೇಕ್ಷಕರ ಮೆದುಳು ಕೆದುಕುವಂಥಾ, Intervalನಲ್ಲಿ ಚರ್ಚೆಗೆ ಎಡೆ ಮಾಡಿಕೊಡುವ ಚಿತ್ರಗಳು ಸಾಕಷ್ಟಿವೆ. ಲೂಸಿಯ, ಉಳಿದವರು ಕಂಡಂತೆ, ರಂಗೀತರಂಗ ಇಂಗ್ಲೀಷ್ ನ Memento, Interstellar, etc,. ಆದರೆ ಈರೀತಿ ಮಕ್ಕಳ ಕಥೆಯ ಹಾಗೆ ತಲೆ ಬುಡವಿಲ್ಲದೆ ಮಾಡಿರುವುದು ವಿಚಿತ್ರವೇ ಸರಿ. ಹಣಗಳಿಸುವ ವ್ಯವಹಾರಿಕವಾಗಿ ಮಾಪನದಲ್ಲಿ ಇದು ದಾಕಲೆ ಮಾಡಬಹುದು ಆದರೆ ಮನಸಿಗೆ ಮುದ ನೀಡುವಲ್ಲಿ, ವಿಷಯ ತಲುಪಿಸುವಲ್ಲಿ ಸೋತಿದೆ.
ಚಿತ್ರದ ಆರಂಭ, ಕಥೆ ಎಂದು ಹೇಳಲಾರೆ, ಚಿತ್ರದಲ್ಲಿಯ ಕೆಲ ಕ್ರಿಯಾಶೀಲತೆ ಅಲ್ಲದೇ ಹಳೇ ಚಿತ್ರವನ್ನು ಮುಂದುವರಿದ ಭಾಗವಾಗಿ ಮಾಡಿ ಹೆಣೆದಿರುವುದು ಚೆನ್ನಾಗಿ ಮೂಡಿ ಬಂದಿದೆ. ಅದಕ್ಕೆ ಸ್ವಲ್ಪ ಕಥೆಯ ಬುನಾದಿ ಇದ್ದಿದ್ದರೆ ಚೆನ್ನಾಗಿ ಇರುತ್ತಿತ್ತೋ ಏನೋ.
ಒಂದು ರೀತಿ ಜನ ಮುಗಿ ಬಿದ್ದು ನೋಡುತ್ತಿರುವುದು (ಕನ್ನಡ ಸಿನಿಮಾದ ಬಗ್ಗೆ ಇರುವ ಕ್ರೇಜಿತನ) ಖುಷಿ ತಂದು ಕೊಟ್ಟರೆ, ತಮ್ಮನ್ನು ತಾವು ಬುದ್ದಿವಂತರೆಂದು ಸಾಭೀತು ಪಡೆಸಲು ಹೊಗುಳುವುದನ್ನು ನೋಡಿದರೆ ನಗೆ ಬರುತ್ತದೆ.
ಹಲಸಿನ ಹಣ್ಣಿನ ಉಪ್ಪಿನಕಾಯಿ ತಿನ್ನುವುದು, ಸೊಪ್ಪಿನ ಪಾಯಸದಲ್ಲಿ ಮೆಣಸಿನ ಕಾಯಿ ಸಿಗುವುದು,
ಉಪ್ಪಿ೨ನಲ್ಲಿ ಕಥೆ ಹುಡುಕಿದಂತೆಂದ ಜಿತೇಂದ್ರ(ಜಗ್ಗಣ್ಣನ ಕ್ಷಮೆಯೊಂದಿಗೆ)
ಎಂದಿನಂತೆ ಅರ್ಥವಾಗದ ಹಾಗೆ ದೊಡ್ಡ ಫಿಲಾಸಫಿಯನ್ನು ಪಕ್ಕ ಲೋಕಲ್ ಸ್ಟಯ್ಲಲ್ಲಿ ಹೇಳಲು ಹೋಗಿ, ಉಪ್ಪಿಲ್ಲದ(ಕಥೆ) ಉಪ್ಪಿಟ್ಟು ಕೊಟ್ಟಿದ್ದಾರೆ ಉಪೇಂದ್ರ. ಉಪ್ಪಿಗಿಂತ ರುಚಿ ಇಲ್ಲ ಎಂದು ಹಾಡಿದವರೇ ಉಪ್ಪು ಹಾಕುವುದು ಮರೆತ ಹಾಗಿದೆ. ಅರ್ಥವಾಗದ ಹಾಗೆ ಚಿತ್ರ ಮಾಡುವುದು ಬುದ್ದಿವಂತಿಕೆ ಎನ್ನುವುದಾದರೆ ಈ ಚಿತ್ರ ಒ.ಕೆ.
ಫಿಲಾಸಫಿಯನ್ನು ಸುಂದರವಾಗಿ ಅರ್ಥವಾಗುವ ಹಾಗೆ ಹೇಳಿದರೆ ಒಳ್ಳೆಯದು ಎಂದು ನನ್ನ ಅಭಿಪ್ರಾಯ. ಅರಿಷಡ್ವರ್ಗಗಳ ಹತೋಟಿ ಬಗ್ಗೆ ಎಡಕಲ್ಲು ಗುಡ್ಡದ ಮೇಲೆ, ಧರಣಿ ಮಂಡಲ ಮಧ್ಯದೊಳಗೆ ಹೀಗೆ ಪುಟ್ಟಣ್ಣನವರು ತೋರಿಸಿಕೊಟ್ಟಿದ್ದಾರೆ. ಆದರೆ ಈರೀತಿ ತಿಕ್ಕುಲುತನ ಎಲ್ಲೂ ಕಂಡುಬಂದಿಲ್ಲ. ಇನ್ನು ಪ್ರೇಕ್ಷಕರ ಮೆದುಳು ಕೆದುಕುವಂಥಾ, Intervalನಲ್ಲಿ ಚರ್ಚೆಗೆ ಎಡೆ ಮಾಡಿಕೊಡುವ ಚಿತ್ರಗಳು ಸಾಕಷ್ಟಿವೆ. ಲೂಸಿಯ, ಉಳಿದವರು ಕಂಡಂತೆ, ರಂಗೀತರಂಗ ಇಂಗ್ಲೀಷ್ ನ Memento, Interstellar, etc,. ಆದರೆ ಈರೀತಿ ಮಕ್ಕಳ ಕಥೆಯ ಹಾಗೆ ತಲೆ ಬುಡವಿಲ್ಲದೆ ಮಾಡಿರುವುದು ವಿಚಿತ್ರವೇ ಸರಿ. ಹಣಗಳಿಸುವ ವ್ಯವಹಾರಿಕವಾಗಿ ಮಾಪನದಲ್ಲಿ ಇದು ದಾಕಲೆ ಮಾಡಬಹುದು ಆದರೆ ಮನಸಿಗೆ ಮುದ ನೀಡುವಲ್ಲಿ, ವಿಷಯ ತಲುಪಿಸುವಲ್ಲಿ ಸೋತಿದೆ.
ಚಿತ್ರದ ಆರಂಭ, ಕಥೆ ಎಂದು ಹೇಳಲಾರೆ, ಚಿತ್ರದಲ್ಲಿಯ ಕೆಲ ಕ್ರಿಯಾಶೀಲತೆ ಅಲ್ಲದೇ ಹಳೇ ಚಿತ್ರವನ್ನು ಮುಂದುವರಿದ ಭಾಗವಾಗಿ ಮಾಡಿ ಹೆಣೆದಿರುವುದು ಚೆನ್ನಾಗಿ ಮೂಡಿ ಬಂದಿದೆ. ಅದಕ್ಕೆ ಸ್ವಲ್ಪ ಕಥೆಯ ಬುನಾದಿ ಇದ್ದಿದ್ದರೆ ಚೆನ್ನಾಗಿ ಇರುತ್ತಿತ್ತೋ ಏನೋ.
ಒಂದು ರೀತಿ ಜನ ಮುಗಿ ಬಿದ್ದು ನೋಡುತ್ತಿರುವುದು (ಕನ್ನಡ ಸಿನಿಮಾದ ಬಗ್ಗೆ ಇರುವ ಕ್ರೇಜಿತನ) ಖುಷಿ ತಂದು ಕೊಟ್ಟರೆ, ತಮ್ಮನ್ನು ತಾವು ಬುದ್ದಿವಂತರೆಂದು ಸಾಭೀತು ಪಡೆಸಲು ಹೊಗುಳುವುದನ್ನು ನೋಡಿದರೆ ನಗೆ ಬರುತ್ತದೆ.
ಹಲಸಿನ ಹಣ್ಣಿನ ಉಪ್ಪಿನಕಾಯಿ ತಿನ್ನುವುದು, ಸೊಪ್ಪಿನ ಪಾಯಸದಲ್ಲಿ ಮೆಣಸಿನ ಕಾಯಿ ಸಿಗುವುದು,
ಉಪ್ಪಿ೨ನಲ್ಲಿ ಕಥೆ ಹುಡುಕಿದಂತೆಂದ ಜಿತೇಂದ್ರ(ಜಗ್ಗಣ್ಣನ ಕ್ಷಮೆಯೊಂದಿಗೆ)