ಬಡವನಿಗೆ ಒಂದು ಮೈಸೂರು ಪಾಕ್ ಸಂತೋಷ ಕೊಟ್ಟರೆ ಶ್ರೀಮಂತನಿಗೆ ದೊಡ್ಡ ಹೋಟೆಲ್ಲಿನಲ್ಲಿ ಬರ್ಗರ್ ಖುಷಿ ಕೊಡಬಹುದು ಹಾಗಾದರೆ ಸಂತೋಷಕ್ಕೆ ವಿಜ್ಞಾನದಲ್ಲಿರುವ ವ್ಯಾಖ್ಯಾನವೇನು?
"ಬಟ್ಟೆಯನು ನೀರೊಳಗದ್ದಿ ಒಣಗಿಸಿ ಉಟ್ಟುಕೊಂಡರದು ಮಡಿಯಲ್ಲ, ಹೊಟ್ಟೆಯೊಳಗಿನ ಕಾಮ, ಮದ, ಮತ್ಸರ ಬಿಟ್ಟು ನಡೆದರೆ ಅದೆ ಮಡಿಯು" ಎಂಬುದರ ಹಿಂದಿನ ನಿಜವಾದ ಮರ್ಮವೇನು?
ಅಂತರಂಗ ಶುದ್ಧಿಯು ಬಹಿರಂಗ ಶುದ್ಧಿಯ ಮೇಲೆ ಅವಲಂಬಿತವಾಗಿರುತ್ತದೆ. ಮನಸ್ಸು ಎಂಬುದು ಎಲ್ಲದಕ್ಕೂ ಮೂಲ, ಇದನ್ನು ನಿಮ್ಮ ವಿಜ್ಞಾನವೂ ಇತ್ತೀಚೆಗೆ ಒಪ್ಪಿದೆ. ಮನಸ್ಸಿನಿಂದ ಎಲ್ಲವನ್ನು ಹಿಡಿತದಲ್ಲಿ ಇಟ್ಟುಕ್ಕೊಳ್ಳಬಹುದು. ನಿಮ್ಮ ಮನಸ್ಸನ್ನು ಯಾವುದಾದರೂ ಒಂದು ವಿಷಯದಲ್ಲಿ ಕೇಂದ್ರೀಕರಿಸಲು ಸುತ್ತಮುತ್ತಲಿನ ವಾತಾವರಣ ಹಾಗು ದೇಹಕ್ಕೆ ಸ್ಪರ್ಷವಾಗಿರುವ ಎಲ್ಲಾ ವಸ್ತುಗಳು ಅತ್ಯಂತ ಪ್ರಭಾವ ಬೀರುತ್ತದೆ. ಕೆಲವು ಉದಾಹರಣೆಗಳನ್ನು ನೋಡುವುದಾದರೆ,
1. ಧ್ಯಾನ ಮಾಡಲು ಕೈಯ್ಯಲ್ಲಿ ಒಂದು ಮೊಬೈಲ್ ಹಿಡಿದುಕೊಂಡರೆ ಸಾಧ್ಯವಿಲ್ಲ, ಹಾಗಾಗಿ ಧ್ಯಾನ ಮಾಡುವಾಗ ಆ ರೀತಿಯ ವಸ್ತುಗಳಿಂದ ದೂರವಿರಬೇಕು ಇದನ್ನೇ ಮಡಿ ಎಂಬುವರು.
2. ಹೊಸ ಬಟ್ಟೆ ಅಥವ ತನಗೆ ಇಷ್ಟವಾದ ಬಟ್ಟೆ ಹಾಕಿ ಧ್ಯಾನ ಮಾಡಲು ಕುಳಿತರೆ ಮರ್ಕಟವೆಂಬ ಮನಸ್ಸು ಸದಾ ಅದರ ಕಡೆಯಲ್ಲಿ ಇರುತ್ತದೆ, ತಾನು ಹೇಗೆ ಕಾಣುವೆ, ಸರಿಯಾಗಿದೆಯ, ನನ್ನ ನೋಡುತ್ತಿದ್ದಾರೆ? ಎಂಬ ಪ್ರಶ್ನೆಗಳು ಮನಸ್ಸಿನಲ್ಲಿ ಮೂಡುತ್ತವೆ, ಹಾಗಾಗಿ ಧ್ಯಾನಕ್ಕೆ ಅಥವ ದೇವರ ಪೂಜೆ ಮಾಡುವಾಗ ಅದಕ್ಕಾಗಿಯೇ ವಿಶೇಷ ಉಡುಪು ಅಗತ್ಯ ಅದನ್ನೇ ಮಡಿ ಬಟ್ಟೆ ಎಂಬುವರು.
3. ದೇಹಕ್ಕೆ ಸುಖ ಸಿಕ್ಕಾಗ ಮನಸ್ಸು ಎಂಬ ಪ್ರೊಸೆಸರ್ ಆಫ್ ಆಗುವುದು ಸಾಮಾನ್ಯ, ವಿಶ್ರಾಂತಿ ಅಥವ ನಿದ್ದೆ ಬಯಸುತ್ತದೆ, ಸ್ವಲ್ಪ ಬೆಚ್ಚನೆಯ ವಾತಾವರಣ ನಮ್ಮ ದೇಹಕ್ಕೆ ತಾಕಿದ ಕೂಡಲೇ ಮನಸ್ಸು ಹಾಗೆ ವಿಶ್ರಮಿಸಲು ಶುರು ಮಾಡುತ್ತದೆ ಹಾಗಾಗಿ ತಣ್ಣೀರಿನಲ್ಲಿ ಸ್ನಾನ, ಒದ್ದೆ ಬಟ್ಟೆ ಉಟ್ಟು ಕೂಡುವುದು, ಇದನ್ನೇ ಮಡಿಯಲ್ಲಿ ಸ್ನಾನ ಮಾಡುವುದು ಎನ್ನುತ್ತಾರೆ.
4. ಧ್ಯಾನದ, ಪೂಜೆಯ ಸಮಯ ನೋಡಿ, ಎಲ್ಲಾ ಬೆಳಗಿನ ಜಾವದಲ್ಲೆ ಹೆಚ್ಚು, ಏಕೆಂದರೆ ಬೆಳಗಿನ ಸಮಯ ಹೊಟ್ಟೆಯಲ್ಲಿ ಆಹಾರ ಪದಾರ್ಥಗಳ್ಯಾವು ಇರುವುದಿಲ್ಲ, ಹಾಗಾಗಿ ಜೀರ್ಣಕ್ರಿಯೆ ವಿಶ್ರಾಂತಿಯಲ್ಲಿ ಇರುತ್ತದೆ, ಹಾಗಾಗಿ ಮನಸ್ಸು ಕೇಂದ್ರೀಕರಿಸಲು ಸಹಾಯ ಮಾಡುತ್ತದೆ, ಹಾಗೂ ಸೂರ್ಯನ ಕಿರಣಗಳು ಒಂದು ನಿರ್ಧಿಷ್ಟ ಓರೆಯಲ್ಲಿ ಬೀಳುವುದರಿಂದ ಪ್ರಕೃತಿ ನಮ್ಮ ದೇಹಕ್ಕೆ ಒಂದು ಧನಾತ್ಮಾಕ ವಾತಾವರಣ ಕಲ್ಪಿಸಿಕೊಡುತ್ತದೆ. (ಸೂರ್ಯನ ಕಿರಣಗಳಿಂದಾಗುವ ಪರಿಣಾಮಗಳು ವಿಜ್ಞಾನದಲ್ಲಿ ಬಹಳಷ್ಟು ಹೇಳಿಯಾಗಿದೆ)
ಹಾಗಾಗಿ ಬಾಹ್ಯ ಮಡಿಯೂ ಅತ್ಯಗತ್ಯ.
ದಾಸರು, ವಚನಕಾರರು ಹೇಳಿರುವುದು ಬಟ್ಟೆಯನು ನೀರೊಳಗದ್ದಿ ಒಣಗಿಸಿ ಉಟ್ಟುಕೊಂಡರದು ಮಡಿಯಲ್ಲ, ಹೊಟ್ಟೆಯೊಳಗಿನ ಕಾಮ, ಮದ, ಮತ್ಸರ ಬಿಟ್ಟು ನಡೆದರೆ ಅದೆ ಮಡಿಯು. ಅಂದರೆ ಬಟ್ಟೆಯನು ನೀರೊಳಗದ್ದದೇ ಸೂಟು ಬೂಟು ಹಾಕಿಯೂ ಮದ ಮತ್ಸರ ಬಿಡಬಹುದು ಎಂದಲ್ಲ, ಅದು ಸಾಧ್ಯವಿಲ್ಲ. ಅವರು ಹೇಳಿರುವುದು ಏನೆಂದರೆ ಬರೀಯ ಬಾಹ್ಯ ಮಡಿ ಮಾಡಬೇಡಿ ಅಂತರಂಗವನ್ನು ಶುದ್ಧಿಕರಿಸಿ ಎಂದೇ ಹೊರೆತು, ಬಾಹ್ಯವನ್ನು ಶುದ್ಧಿಗೊಳಿಸದೇ ಅಂತರಂಗವನ್ನು ಶುದ್ಧಿಗೊಳಿಸಿ ಎಂದಲ್ಲ, ಅದು ಸಾಧ್ಯವೇ ಇಲ್ಲ.
ಎಲ್ಲವನ್ನು ವೈಜ್ಣ್ಯಾನಿಕವಾಗಿ ನೋಡಲು ಹೋಗುವುದು ಅತ್ಯಂತ ಮೂರ್ಖತನ. ವೈಜ್ಞಾನಿಕವಾಗಿ ನೆಮ್ಮದಿ, ಸಂತೋಷ ಎಂಬ ಪದಗಳಿಗೆ ಸರಿಯಾದ ವ್ಯಾಖ್ಯಾನ ಇಲ್ಲ. ಬಡವನಿಗೆ ಒಂದು ಮೈಸೂರು ಪಾಕ್ ಸಂತೋಷ ಕೊಟ್ಟರೆ, ಶ್ರೀಮಂತನಿಗೆ ದೊಡ್ಡ ಹೋಟೆಲ್ಲಿನಲ್ಲಿ ಬರ್ಗರ್ ಖುಶಿ ಕೊಡಬಹುದು. ಹೀಗೆ ಎರೆಡು ವ್ಯಾಖ್ಯಾನಗಳನ್ನು ವಿಜ್ಞಾನ ಒಪ್ಪುವುದಿಲ್ಲ. ಯಾವುದನ್ನು ತಪ್ಪು ಅಥವ ಸುಳ್ಳು ಎಂಬುದು ಹೇಳಲು ಬರುವುದೋ ಅದನ್ನು statement ಎಂದು mathematical reasoningಲಿ ಕರೆಯುತ್ತಾರೆ, ಹಾಗೆ ಆ statement ಲಿ ಯಾವುದೇ ಗುಣವಾಚಕಗಳು ಇರಬಾರದು, ಉದಾಹರಣೆಗೆ ಗಣಿತ ಒಂದು ಸುಂದರ ವಿಷಯ, ಇಲ್ಲಿ ಸುಂದರ ಎಂಬುದು ಗುಣವಾಚಕ, ಇದು ವ್ಯಕ್ತಿಯ ಭಾವನೆಗಳ ಮೇಲೆ ಅವಲಂಬಿತ, ಒಬ್ಬನಿಗೆ ಸುಂದರವಾಗಿ ಕಂಡದ್ದು ಇನ್ನೊಬ್ಬನಿಗೆ ಕಾಣದೇ ಇರಬಹುದು, ಹಾಗಾಗಿ ಅಂಥ statement ಅಲ್ಲದೇ ಇರುವುದಕ್ಕೆ mathematical formation ಮಾಡಲು ಸಾಧ್ಯವಿಲ್ಲ, mathematics ಲಿ express ಮಾಡಲು ಸಾಧ್ಯವಾಗದಿದ್ದರೆ ಅದನ್ನು ವಿಜ್ಞಾನ ತನ್ನ ವ್ಯಾಪ್ತಿ ಇಂದ ಹೊರಗಿಡುತ್ತದೆ. ಮನಸ್ಸು ಕೂಡ ಹಾಗೆ ಮನಸ್ಸಿನ ಭಾವನೆಗಳನ್ನು ವಿಜ್ಞಾನ ವ್ಯಾಖ್ಯಾನಿಸಲೂ ಸಾಧ್ಯವೇ ಇಲ್ಲ. ಆದರೆ ಆ ಭಾವನೆಗಳ ಮಹತ್ವ ದೊಡ್ಡದ್ದು.
1. ಮಗುವಿಗೆ ಎಷ್ಟೇ ವೈಜ್ಞಾನಿಕ ಔಷಧಿಗಳನ್ನು ಕೊಟ್ಟು ಬೆಳಸಿದರೂ ತಾಯಿಯ ಪ್ರೀತಿಯ ಹಾಲು ಸಮವಾಗಲಾರದು.
2. ತುಂಬಾ ಕಷ್ಟದಲ್ಲಿ ದೇವರ ಮುಂದೆ ಬಂದು ನಿಂತು ಮನಃಪೂರ್ತಿಯಾಗಿ ಬೇಡಿಕೊಂಡಾಗ ಆಗುವ ಸಂತೃಪ್ತಿಗೆ ಹಾಗು ಸಿಗುವ ಆತ್ಮಸ್ಥೈರ್ಯಕ್ಕೆ ಬೇರೆ ಪರಿಹಾರವಿಲ್ಲ.
3. ನಂಬಿಕೆ ಎಂಬುದಕ್ಕೆ ವಿಜ್ಞಾನದಲ್ಲಿ ಏನಿದೆ? ವಿಜ್ಞಾನದ ಕುಡಿಗಳೇ ಆದ ಇಬ್ಬರು ವೈದ್ಯರ ಬಳಿ ಆಯ್ಕೆ ಮಾಡುವಾಗ ವಿಜ್ಞಾನ ಮಧ್ಯ ಬರುವುದಿಲ್ಲ, ನಮ್ಮಲ್ಲಿ ಇರುವ ನಂಬಿಕೆ ವೈದ್ಯನನ್ನು ಹುಡುಕಲು ನೆರವಾಗುತ್ತದೆ. ಅದನ್ನು ಮೂಢನಂಬಿಕೆ ಎನ್ನಲು ಸಾಧ್ಯವೇ?
4. ವಿಜ್ಞಾನ ಉಪಯೋಗಿಸುವ ಪ್ರಕೃತಿ ಎಂಬ ಪದಕ್ಕೆ ಸರಿಯಾದ ವ್ಯಾಖ್ಯಾನ ಇಲ್ಲ. ಇವೆಲ್ಲಾ ಪ್ರಕೃತಿಯ ವಿಸ್ಮಯ ಎಂದು ಕೈ ತೊಳೆದುಕೊಳ್ಳುತ್ತಾರೆ, ನಾವು ಅದನ್ನೇ ದೇವರ ಆಟ ಎಂದರೆ ಮೂಗೆಳೆಯುತ್ತಾರೆ, ಮೂಢನಂಬಿಕೆ ಎಂದು ಬೊಬ್ಬೆಹಾಕುತ್ತಾರೆ.
ಆಚರಣೆಗಳನ್ನು ಮನಸ್ಸಿನ ನೆಮ್ಮದಿಗೋಸ್ಕರ ಮಾಡುವುದು, ಅದರಲ್ಲಿ ವಿಜ್ಞಾನದ ಎಳೆಯನ್ನು ಹುಡುಕುವುದು ಅತ್ಯಂತ ಮೂರ್ಖತನವಲ್ಲದೇ ಮತ್ತೇನಲ್ಲ.
#ನನ್ನ_ಸನಾತನ_ನನ್ನ_ಹೆಮ್ಮೆ
#ನನಗನಿಸಿದ್ದು
"ಬಟ್ಟೆಯನು ನೀರೊಳಗದ್ದಿ ಒಣಗಿಸಿ ಉಟ್ಟುಕೊಂಡರದು ಮಡಿಯಲ್ಲ, ಹೊಟ್ಟೆಯೊಳಗಿನ ಕಾಮ, ಮದ, ಮತ್ಸರ ಬಿಟ್ಟು ನಡೆದರೆ ಅದೆ ಮಡಿಯು" ಎಂಬುದರ ಹಿಂದಿನ ನಿಜವಾದ ಮರ್ಮವೇನು?
ಅಂತರಂಗ ಶುದ್ಧಿಯು ಬಹಿರಂಗ ಶುದ್ಧಿಯ ಮೇಲೆ ಅವಲಂಬಿತವಾಗಿರುತ್ತದೆ. ಮನಸ್ಸು ಎಂಬುದು ಎಲ್ಲದಕ್ಕೂ ಮೂಲ, ಇದನ್ನು ನಿಮ್ಮ ವಿಜ್ಞಾನವೂ ಇತ್ತೀಚೆಗೆ ಒಪ್ಪಿದೆ. ಮನಸ್ಸಿನಿಂದ ಎಲ್ಲವನ್ನು ಹಿಡಿತದಲ್ಲಿ ಇಟ್ಟುಕ್ಕೊಳ್ಳಬಹುದು. ನಿಮ್ಮ ಮನಸ್ಸನ್ನು ಯಾವುದಾದರೂ ಒಂದು ವಿಷಯದಲ್ಲಿ ಕೇಂದ್ರೀಕರಿಸಲು ಸುತ್ತಮುತ್ತಲಿನ ವಾತಾವರಣ ಹಾಗು ದೇಹಕ್ಕೆ ಸ್ಪರ್ಷವಾಗಿರುವ ಎಲ್ಲಾ ವಸ್ತುಗಳು ಅತ್ಯಂತ ಪ್ರಭಾವ ಬೀರುತ್ತದೆ. ಕೆಲವು ಉದಾಹರಣೆಗಳನ್ನು ನೋಡುವುದಾದರೆ,
1. ಧ್ಯಾನ ಮಾಡಲು ಕೈಯ್ಯಲ್ಲಿ ಒಂದು ಮೊಬೈಲ್ ಹಿಡಿದುಕೊಂಡರೆ ಸಾಧ್ಯವಿಲ್ಲ, ಹಾಗಾಗಿ ಧ್ಯಾನ ಮಾಡುವಾಗ ಆ ರೀತಿಯ ವಸ್ತುಗಳಿಂದ ದೂರವಿರಬೇಕು ಇದನ್ನೇ ಮಡಿ ಎಂಬುವರು.
2. ಹೊಸ ಬಟ್ಟೆ ಅಥವ ತನಗೆ ಇಷ್ಟವಾದ ಬಟ್ಟೆ ಹಾಕಿ ಧ್ಯಾನ ಮಾಡಲು ಕುಳಿತರೆ ಮರ್ಕಟವೆಂಬ ಮನಸ್ಸು ಸದಾ ಅದರ ಕಡೆಯಲ್ಲಿ ಇರುತ್ತದೆ, ತಾನು ಹೇಗೆ ಕಾಣುವೆ, ಸರಿಯಾಗಿದೆಯ, ನನ್ನ ನೋಡುತ್ತಿದ್ದಾರೆ? ಎಂಬ ಪ್ರಶ್ನೆಗಳು ಮನಸ್ಸಿನಲ್ಲಿ ಮೂಡುತ್ತವೆ, ಹಾಗಾಗಿ ಧ್ಯಾನಕ್ಕೆ ಅಥವ ದೇವರ ಪೂಜೆ ಮಾಡುವಾಗ ಅದಕ್ಕಾಗಿಯೇ ವಿಶೇಷ ಉಡುಪು ಅಗತ್ಯ ಅದನ್ನೇ ಮಡಿ ಬಟ್ಟೆ ಎಂಬುವರು.
3. ದೇಹಕ್ಕೆ ಸುಖ ಸಿಕ್ಕಾಗ ಮನಸ್ಸು ಎಂಬ ಪ್ರೊಸೆಸರ್ ಆಫ್ ಆಗುವುದು ಸಾಮಾನ್ಯ, ವಿಶ್ರಾಂತಿ ಅಥವ ನಿದ್ದೆ ಬಯಸುತ್ತದೆ, ಸ್ವಲ್ಪ ಬೆಚ್ಚನೆಯ ವಾತಾವರಣ ನಮ್ಮ ದೇಹಕ್ಕೆ ತಾಕಿದ ಕೂಡಲೇ ಮನಸ್ಸು ಹಾಗೆ ವಿಶ್ರಮಿಸಲು ಶುರು ಮಾಡುತ್ತದೆ ಹಾಗಾಗಿ ತಣ್ಣೀರಿನಲ್ಲಿ ಸ್ನಾನ, ಒದ್ದೆ ಬಟ್ಟೆ ಉಟ್ಟು ಕೂಡುವುದು, ಇದನ್ನೇ ಮಡಿಯಲ್ಲಿ ಸ್ನಾನ ಮಾಡುವುದು ಎನ್ನುತ್ತಾರೆ.
4. ಧ್ಯಾನದ, ಪೂಜೆಯ ಸಮಯ ನೋಡಿ, ಎಲ್ಲಾ ಬೆಳಗಿನ ಜಾವದಲ್ಲೆ ಹೆಚ್ಚು, ಏಕೆಂದರೆ ಬೆಳಗಿನ ಸಮಯ ಹೊಟ್ಟೆಯಲ್ಲಿ ಆಹಾರ ಪದಾರ್ಥಗಳ್ಯಾವು ಇರುವುದಿಲ್ಲ, ಹಾಗಾಗಿ ಜೀರ್ಣಕ್ರಿಯೆ ವಿಶ್ರಾಂತಿಯಲ್ಲಿ ಇರುತ್ತದೆ, ಹಾಗಾಗಿ ಮನಸ್ಸು ಕೇಂದ್ರೀಕರಿಸಲು ಸಹಾಯ ಮಾಡುತ್ತದೆ, ಹಾಗೂ ಸೂರ್ಯನ ಕಿರಣಗಳು ಒಂದು ನಿರ್ಧಿಷ್ಟ ಓರೆಯಲ್ಲಿ ಬೀಳುವುದರಿಂದ ಪ್ರಕೃತಿ ನಮ್ಮ ದೇಹಕ್ಕೆ ಒಂದು ಧನಾತ್ಮಾಕ ವಾತಾವರಣ ಕಲ್ಪಿಸಿಕೊಡುತ್ತದೆ. (ಸೂರ್ಯನ ಕಿರಣಗಳಿಂದಾಗುವ ಪರಿಣಾಮಗಳು ವಿಜ್ಞಾನದಲ್ಲಿ ಬಹಳಷ್ಟು ಹೇಳಿಯಾಗಿದೆ)
ಹಾಗಾಗಿ ಬಾಹ್ಯ ಮಡಿಯೂ ಅತ್ಯಗತ್ಯ.
ದಾಸರು, ವಚನಕಾರರು ಹೇಳಿರುವುದು ಬಟ್ಟೆಯನು ನೀರೊಳಗದ್ದಿ ಒಣಗಿಸಿ ಉಟ್ಟುಕೊಂಡರದು ಮಡಿಯಲ್ಲ, ಹೊಟ್ಟೆಯೊಳಗಿನ ಕಾಮ, ಮದ, ಮತ್ಸರ ಬಿಟ್ಟು ನಡೆದರೆ ಅದೆ ಮಡಿಯು. ಅಂದರೆ ಬಟ್ಟೆಯನು ನೀರೊಳಗದ್ದದೇ ಸೂಟು ಬೂಟು ಹಾಕಿಯೂ ಮದ ಮತ್ಸರ ಬಿಡಬಹುದು ಎಂದಲ್ಲ, ಅದು ಸಾಧ್ಯವಿಲ್ಲ. ಅವರು ಹೇಳಿರುವುದು ಏನೆಂದರೆ ಬರೀಯ ಬಾಹ್ಯ ಮಡಿ ಮಾಡಬೇಡಿ ಅಂತರಂಗವನ್ನು ಶುದ್ಧಿಕರಿಸಿ ಎಂದೇ ಹೊರೆತು, ಬಾಹ್ಯವನ್ನು ಶುದ್ಧಿಗೊಳಿಸದೇ ಅಂತರಂಗವನ್ನು ಶುದ್ಧಿಗೊಳಿಸಿ ಎಂದಲ್ಲ, ಅದು ಸಾಧ್ಯವೇ ಇಲ್ಲ.
ಎಲ್ಲವನ್ನು ವೈಜ್ಣ್ಯಾನಿಕವಾಗಿ ನೋಡಲು ಹೋಗುವುದು ಅತ್ಯಂತ ಮೂರ್ಖತನ. ವೈಜ್ಞಾನಿಕವಾಗಿ ನೆಮ್ಮದಿ, ಸಂತೋಷ ಎಂಬ ಪದಗಳಿಗೆ ಸರಿಯಾದ ವ್ಯಾಖ್ಯಾನ ಇಲ್ಲ. ಬಡವನಿಗೆ ಒಂದು ಮೈಸೂರು ಪಾಕ್ ಸಂತೋಷ ಕೊಟ್ಟರೆ, ಶ್ರೀಮಂತನಿಗೆ ದೊಡ್ಡ ಹೋಟೆಲ್ಲಿನಲ್ಲಿ ಬರ್ಗರ್ ಖುಶಿ ಕೊಡಬಹುದು. ಹೀಗೆ ಎರೆಡು ವ್ಯಾಖ್ಯಾನಗಳನ್ನು ವಿಜ್ಞಾನ ಒಪ್ಪುವುದಿಲ್ಲ. ಯಾವುದನ್ನು ತಪ್ಪು ಅಥವ ಸುಳ್ಳು ಎಂಬುದು ಹೇಳಲು ಬರುವುದೋ ಅದನ್ನು statement ಎಂದು mathematical reasoningಲಿ ಕರೆಯುತ್ತಾರೆ, ಹಾಗೆ ಆ statement ಲಿ ಯಾವುದೇ ಗುಣವಾಚಕಗಳು ಇರಬಾರದು, ಉದಾಹರಣೆಗೆ ಗಣಿತ ಒಂದು ಸುಂದರ ವಿಷಯ, ಇಲ್ಲಿ ಸುಂದರ ಎಂಬುದು ಗುಣವಾಚಕ, ಇದು ವ್ಯಕ್ತಿಯ ಭಾವನೆಗಳ ಮೇಲೆ ಅವಲಂಬಿತ, ಒಬ್ಬನಿಗೆ ಸುಂದರವಾಗಿ ಕಂಡದ್ದು ಇನ್ನೊಬ್ಬನಿಗೆ ಕಾಣದೇ ಇರಬಹುದು, ಹಾಗಾಗಿ ಅಂಥ statement ಅಲ್ಲದೇ ಇರುವುದಕ್ಕೆ mathematical formation ಮಾಡಲು ಸಾಧ್ಯವಿಲ್ಲ, mathematics ಲಿ express ಮಾಡಲು ಸಾಧ್ಯವಾಗದಿದ್ದರೆ ಅದನ್ನು ವಿಜ್ಞಾನ ತನ್ನ ವ್ಯಾಪ್ತಿ ಇಂದ ಹೊರಗಿಡುತ್ತದೆ. ಮನಸ್ಸು ಕೂಡ ಹಾಗೆ ಮನಸ್ಸಿನ ಭಾವನೆಗಳನ್ನು ವಿಜ್ಞಾನ ವ್ಯಾಖ್ಯಾನಿಸಲೂ ಸಾಧ್ಯವೇ ಇಲ್ಲ. ಆದರೆ ಆ ಭಾವನೆಗಳ ಮಹತ್ವ ದೊಡ್ಡದ್ದು.
1. ಮಗುವಿಗೆ ಎಷ್ಟೇ ವೈಜ್ಞಾನಿಕ ಔಷಧಿಗಳನ್ನು ಕೊಟ್ಟು ಬೆಳಸಿದರೂ ತಾಯಿಯ ಪ್ರೀತಿಯ ಹಾಲು ಸಮವಾಗಲಾರದು.
2. ತುಂಬಾ ಕಷ್ಟದಲ್ಲಿ ದೇವರ ಮುಂದೆ ಬಂದು ನಿಂತು ಮನಃಪೂರ್ತಿಯಾಗಿ ಬೇಡಿಕೊಂಡಾಗ ಆಗುವ ಸಂತೃಪ್ತಿಗೆ ಹಾಗು ಸಿಗುವ ಆತ್ಮಸ್ಥೈರ್ಯಕ್ಕೆ ಬೇರೆ ಪರಿಹಾರವಿಲ್ಲ.
3. ನಂಬಿಕೆ ಎಂಬುದಕ್ಕೆ ವಿಜ್ಞಾನದಲ್ಲಿ ಏನಿದೆ? ವಿಜ್ಞಾನದ ಕುಡಿಗಳೇ ಆದ ಇಬ್ಬರು ವೈದ್ಯರ ಬಳಿ ಆಯ್ಕೆ ಮಾಡುವಾಗ ವಿಜ್ಞಾನ ಮಧ್ಯ ಬರುವುದಿಲ್ಲ, ನಮ್ಮಲ್ಲಿ ಇರುವ ನಂಬಿಕೆ ವೈದ್ಯನನ್ನು ಹುಡುಕಲು ನೆರವಾಗುತ್ತದೆ. ಅದನ್ನು ಮೂಢನಂಬಿಕೆ ಎನ್ನಲು ಸಾಧ್ಯವೇ?
4. ವಿಜ್ಞಾನ ಉಪಯೋಗಿಸುವ ಪ್ರಕೃತಿ ಎಂಬ ಪದಕ್ಕೆ ಸರಿಯಾದ ವ್ಯಾಖ್ಯಾನ ಇಲ್ಲ. ಇವೆಲ್ಲಾ ಪ್ರಕೃತಿಯ ವಿಸ್ಮಯ ಎಂದು ಕೈ ತೊಳೆದುಕೊಳ್ಳುತ್ತಾರೆ, ನಾವು ಅದನ್ನೇ ದೇವರ ಆಟ ಎಂದರೆ ಮೂಗೆಳೆಯುತ್ತಾರೆ, ಮೂಢನಂಬಿಕೆ ಎಂದು ಬೊಬ್ಬೆಹಾಕುತ್ತಾರೆ.
ಆಚರಣೆಗಳನ್ನು ಮನಸ್ಸಿನ ನೆಮ್ಮದಿಗೋಸ್ಕರ ಮಾಡುವುದು, ಅದರಲ್ಲಿ ವಿಜ್ಞಾನದ ಎಳೆಯನ್ನು ಹುಡುಕುವುದು ಅತ್ಯಂತ ಮೂರ್ಖತನವಲ್ಲದೇ ಮತ್ತೇನಲ್ಲ.
#ನನ್ನ_ಸನಾತನ_ನನ್ನ_ಹೆಮ್ಮೆ
#ನನಗನಿಸಿದ್ದು