ರಜನಿ ಅಭಿಮಾನಿಗಳು ಇದನ್ನು ಓದಬೇಡಿ.
ಮೊದಲೇ ಹೇಳುತ್ತಿದ್ದೇನೆ, ರಜನಿಯ ವಯಕ್ತಿಕ ವಿಷಯ, ಬದುಕುವ ರೀತಿ, ಸರಳತೆಗೆ ನನ್ನ ಅಪಾರ ಗೌರವವಿದೆ, ಅಷ್ಟು ದೊಡ್ಡ ಸ್ಟಾರ್ಗಿರಿ ಇಟ್ಟುಕೊಂಡು ಹಾಗೆ ಬದುಕುತ್ತಿರುವುದು ನಿಜಕ್ಕೂ ಮೆಚ್ಚುವಂತದ್ದು.
ರಜನಿಕಾಂತ್ ರಾಜ್ಕುಮಾರರ ಅಪ್ಪಟ ಅಭಿಮಾನಿ, ರಾಜ್ಕುಮಾರರನ್ನು ಬಾಯ್ತುಂಬಾ ಹೊಗಳಿದ್ದನ್ನು, ಅವರ ನಟನೆ ಮುಂದೆ ನನ್ನ ನಟನೆ ಏನೂ ಇಲ್ಲ ಎಂದು ಹೇಳಿದ್ದನ್ನು ಯೂಟ್ಯೂಬ್ನಲ್ಲಿ ನೋಡಬಹುದು. ಆದರೂ ಕರ್ನಾಟಕದಲ್ಲಿ ರಾಜ್ಕುಮಾರರ ಅಭಿಮಾನಿಗಳ ಸಂಖ್ಯೆ ಕಡಿಮೆ. ಇದಕ್ಕೆ ಮೊದಲ ಕಾರಣ ನಮ್ಮ ಜನಕ್ಕೆ ಆ ಕ್ರೇಜ್ ಇಲ್ಲ. ಒಬ್ಬ ಸಿನಿಮ ಹೀರೋನ ಸಿನಿಮದಲ್ಲಿ ನೋಡಿ ಮೂರು ದಿನದ ನಂತರ ಮರೆತುಬಿಡುತ್ತಾರೆ. ಆದರೆ ತ.ನಾ ಆ.ಪ್ರ ಗಳಲ್ಲಿ ಹಾಗಿಲ್ಲ. ಅವರ ಸಿನಿಮ ನಟರ, ರಾಜಕೀಯ ವ್ಯಕ್ತಿಗಳ ಮೇಲಿನ ಅಭಿಮಾನ ನಮಗಿಂತ ನೂರು, ಸಾವಿರ ಪಟ್ಟು ಹೆಚ್ಚು. ಆದಾಗಿಯೂ ಕೆಲವೊಮ್ಮೆ ಸಣ್ಣದಾಗಿ ಚರ್ಚೆ ನಡೆಯುತ್ತಿರುತ್ತದೆ, ಆಗ ರಾಜ್ಕುಮಾರರ ವಯಕ್ತಿಕ ವಿಷಯವನ್ನು ಎಳೆಯುತ್ತಾರೆ. ನನಗೆ ಅರ್ಥವಾಗದಿದ್ದು ಅದೇ, ಸಿನಿಮ ನಟರ ವಯಕ್ತಿಕ ವಿಚಾರಗಳನ್ನು ತಂದು ಆತನ ಸಿನಿಮಾಗಳನ್ನು ನೋಡದಿರುವುದು ಅಥವಾ ಹುಚ್ಚೆದ್ದು ನೋಡುವುದು ತಪ್ಪಾಗುತ್ತದೆ.
ರಜನಿಯ ವಿಚಾರದಲ್ಲೂ ಅಷ್ಟೆ, ಅತಿ ಹೆಚ್ಚು ಫ್ಯಾಂಟಸಿ, ಹೀರೋಯಿಸಂ ಅನ್ನು ಬಯಸುವ ತ.ನಾ ನ ಜನತೆಗೆ, ರಜನಿಯ ಚಿತ್ರ ವಿಚಿತ್ರ ಸ್ಟಂಟುಗಳು, ರೋಮಗಳನ್ನು ಎಬ್ಬಿಸುವ ಆರ್ಭಟದ ಡೈಲಾಗುಗಳು, ಅಸಾಧಾರಣವಾಗಿ ನಡೆಯುವ ರೀತಿ ಹುಚ್ಚೆಬ್ಬಿಸಿತು, ಆತನನ್ನು ಆರಾಧಿಸಲು ಪ್ರಾರಂಭಿಸಿದರು. ಅಲ್ಲಿಯ ಜನರ ಮನಸ್ಥಿತಿಗೆ, ಅವರ ರುಚಿಗೆ ಆತ ದೈವನಾದ. ರಜನಿಕಾಂತರೂ ಕೂಡ ಅವರ ಅಭಿಮಾನವನ್ನು ಉಳಿಸಿಕೊಂಡರು, ಸ್ಟಾರ್ ಗಿರಿಯು ತಲೆಗೆ ಏರಿಸಿಕೊಳ್ಳದೆ, ಸರಳತೆಯನ್ನು ಮೆರೆದರು. ಎಷ್ಟೋ ಸಹಾಯಗಳನ್ನು ಮಾಡಿದರು. ಇದನ್ನು ನೋಡುತ್ತಿದ್ದ ಕರ್ನಾಟಕದ ಜನತೆಗೆ, ಎಲ್ಲೋ ಮೂಲೆಯಲ್ಲಿ ಅವನ ನಟನೆ ವಿಚಿತ್ರವೆನಿಸಿದರೂ ಅವನ ಅಭಿಮಾನಿಗಳ ಕ್ರೇಜ್ ಇವರಲ್ಲೂ ಒತ್ತಾಯವಾಗಿ ಹರಿದಾಡಲು ಪ್ರಾರಂಭಿಸಿತು. ಇದಕ್ಕೆ ಜನ ಮರಳೋ ಜಾತ್ರೆ ಮರಳೋ ಎನ್ನುವುದು. ನಿಮಗೆ ಗೊತ್ತಿರಬಹುದು, ತ.ನಾ ಜನ ಕರ್ನಾಟಕದ ಹಲವೆಡೆ ವಾಸವಾಗಿದ್ದಾರೆ. ಭದ್ರಾವತಿ, ಶಿವಮೊಗ್ಗದಲ್ಲಂತೂ ಕೆಲವು ಹಳ್ಳಿಗಳು ಕರ್ನಾಟಕದಲ್ಲಿ ಇದಾವಾ ಎಂಬ ಪ್ರಶ್ನೆ ಮೂಡಿಸುವಷ್ಟು ತಮಿಳುಮಯವಾಗಿವೆ. ಅಂಕಿ ಅಂಶಗಳ ಪ್ರಕಾರ ತ.ನಾನಲ್ಲಿ ಕನ್ನಡ ಮಾತಾಡುವವರಿಗಿಂತ ಎರಡರಷ್ಟು ಕರ್ನಾಟಕದಲ್ಲಿ ತಮಿಳು ಮಾತಾಡುವವರಿದ್ದಾರೆ. ಅವರು ರಜನಿಯ ಚಿತ್ರಗಳನ್ನು ನೋಡಿ ಕುಣಿದಾಡುತ್ತಿದ್ದ ರೀತಿ ನೋಡಿ ಸ್ವಲ್ಪ ವಿರೋಧಿಸಿದರೆ ರಜನಿಯ ವಯಕ್ತಿಕ ಜೀವನವನ್ನು ತಂದಿಟ್ಟು ಅವನನ್ನು ಹೀರೋ ಎಂದು ಬಿಂಬಿಸಿ ವಿರೋಧಿಸಲು ಬಂದವರ ಬಾಯಿ ಮುಚ್ಚಿಸುತ್ತಾರೆ. ಉಪೇಂದ್ರ ಹೇಳಿದ್ದು ನಿಜ ನಾವು ಕನ್ನಡಿಗರಲ್ಲವೋ ವಿಶಾಲ ಹೃದಯದವರು.
ಇನ್ನು ಒಂದು ರೀತಿ ಅಭಿಮಾನಿಗಳಿದ್ದಾರೆ, ಸಿನಿಮಾವನ್ನು ಮನೋರಂಜನೆಗಾಗಿ ನೋಡುತ್ತೇವೆ, ಫ್ಯಾಂಟಸಿ ಇಷ್ಟ, ಅದರಲ್ಲಿ ನ್ಯೂಟನ್ ನ ಪ್ರಮೇಯಗಳನ್ನು ಹುಡುಕುವುದು ತಪ್ಪು ಎಂದು, ಹಾಗಾದರೆ ಅವರ ಸಿನಿಮಾದಲ್ಲಿ ಸಮಾಜಕ್ಕೆ ಸಂದೇಶ ಇದೆ ಎಂಬ ಮಾತನ್ನು ಯಾಕೆ ಹೇಳುತ್ತಾರೆ? ಮನೋರಂಜನೆಗಾಗಿ ನೋಡುವವರಿಗೆ ಸಮಾಜಕ್ಕೆ ಸಂದೇಶ ಕೊಡುತ್ತದೋ ಇಲ್ಲವೋ ಏಕೆ ಬೇಕು? ಇರಲಿ, ನೈಜತೆ ಬೇಡ, ನೈಜತೆಗೆ ಕಾಲುಭಾಗವಾದರೂ ಇರಬೇಕು ಅಲ್ಲವೇ? ಸಿನಿಮೀಯ ಎಂದು ಆತನ ಸ್ಟಂಟ್ಸ್, ಸ್ಟೈಲ್, ಡೈಲಾಗ್ ಡೆಲಿವರಿ ವಿಪರೀತವಾದರೂ ಮೆಚ್ಚುವುದು ಯಾವ ನ್ಯಾಯ? ಬೆಳಗ್ಗೆ ಬೆಳಗ್ಗೆ ವಾಚಿಂಗ್ ಕಬಾಲಿ ಅಂತ ಹಾಕಿಕೊಂಡರೀತಿಯಲ್ಲಿ ವಾಚಿಂಗ್ ರಂಗೀತರಂಗ, ಲೂಸಿಯ, ಗೋ.ಬ.ಸಾ.ಮೈ ಅಂತೆಲ್ಲಾ ಹಾಕಿಕೊಂಡಿದ್ದು ನೋಡಿಲ್ಲ. ತ.ನಾ ಜನರ ಕ್ರೇಜ್ ನಮ್ಮಲ್ಲಿ ಟ್ರಾನ್ಸ್ ಫಾರ್ಮ್ ಆಗಿದೆಯೇ ಹೊರೆತು, ನಮ್ಮಲ್ಲಿ ಎಲ್ಲೋ ಮೂಲೆಯಲ್ಲಿ ಅವನ ನಟನೆ, ಸಿನಿಮಾ ಶೈಲಿಯನ್ನು ನೋಡಿ ನಗು ಬರುವುದಂತು ಸತ್ಯ. ನೀವು ಎಷ್ಟೇ ಚೆನ್ನಾಗಿರೋ ಸಿನಿಮಾ ಮಾಡಿ, ನಮ್ಮ ನಟರ ಮೇಲೆ ಆ ಕ್ರೇಜ್ ಬರುವುದಿಲ್ಲ, ಏಕೆಂದರೆ ಮೂಲತಹ ನಾವು ಕ್ರೇಜ್ ಬೆಳೆಸಿಕೊಳ್ಳುವವರಲ್ಲ. ಕ್ರೇಜ್ ಹುಟ್ಟುವುದು, ಹುಚ್ಚೆದ್ದು ಅಭಿಮಾನ ತೋರಿಸುವವರನ್ನು ನೋಡಿದಾಗ. ನಮ್ಮವರ ಮೇಲೆ ಬಾರದ ಕ್ರೇಜ್ ಆ ನಟರ ಮೇಲೆ ಬಂದಿದೆಯೆಂದರೆ ಇದು ನಮಗೆ ತ.ನಾ ನ ಜನರನ್ನು ನೋಡಿ ಬಂದಿರುವ ಕ್ರೇಜ್ ಅಷ್ಟೇ. ಜನ ಮರಳೋ ಜಾತ್ರೆ ಮರಳೋ ಎಂಬಂತೆ.
ಕೊನೆಯದಾಗಿ ರಜನಿಯವರೇ ರಾಜ್ಕುಮಾರರ ಕುರಿತು ಹೇಳಿದ ಪ್ರಸಂಗವನ್ನು ಹೇಳ್ಬೇಕೆಂದೆನಿಸಿದೆ.
ರಜನಿ ಮತ್ತು ರಾಜಣ್ಣ ಹೋಗುತ್ತಿದ್ದ ಕಾರು ಕೆಟ್ಟು ನಿಂತಾಗ ರಾಜಣ್ಣನನ್ನು ನೋಡಿ ಎಲ್ಲರೂ ನಮಸ್ಕಾರ ಮಾಡಿದರಂತೆ, ಕಾರಿನಲ್ಲಿ ಮುಂದೆ ಹೊರಟಾಗ ರಾಜಣ್ಣ ರಜನಿಗೆ ಹೇಳಿದರಂತೆ, ನೋಡಿದಿರಾ ಎಷ್ಟೋಂದು ಮರ್ಯಾದೆ ಅಂತ. ರಜನಿ ನಿಮಗಲ್ಲದೆ ಬೇರೆಯಾರಿಗೆ ಕೊಡುತ್ತಾರೆ ಅಂದಾಗ, ಹುಚ್ಚಪ್ಪಾ ನನಗಲ್ಲ ಕೊಟ್ಟಿದ್ದ್ದು ಮರ್ಯಾದೆ, ನನ್ನಲ್ಲಿರೋ ಸರಸ್ವತಿಗೆ ಎಂದರಂತೆ ರಾಜಣ್ಣ. ರಜನಿಯ ವಯಕ್ತಿಕ ಜೀವನ ಇಷ್ಟೋಂದು ಸರಳವಾಗಿರುವುದಕ್ಕೆ ರಾಜಣ್ಣ ಆದರ್ಶವೇ ಕಾರಣವಿದ್ದರೂ ಇರಬಹುದು.
ಸಾರಾಂಶ ಇಷ್ಟೇ, ನಟನೆಯ ವಿಷಯದಲ್ಲಿ ರಜನಿಕಾಂತರ ನಟನೆ ನನಗೆ ಸ್ವಲ್ಪವೂ ಹಿಡಿಸಲಿಲ್ಲ. ಹಾಗಂತ ನಿಮಗೂ ಹಿಡಿಸಬಾರದೆಂದು ಯಾವ ಒತ್ತಡವೂ ಮಾಡುವುದಿಲ್ಲ. ಲೋಕೋ ಭಿನ್ನ ರುಚಿಃ.
ಮೊದಲೇ ಹೇಳುತ್ತಿದ್ದೇನೆ, ರಜನಿಯ ವಯಕ್ತಿಕ ವಿಷಯ, ಬದುಕುವ ರೀತಿ, ಸರಳತೆಗೆ ನನ್ನ ಅಪಾರ ಗೌರವವಿದೆ, ಅಷ್ಟು ದೊಡ್ಡ ಸ್ಟಾರ್ಗಿರಿ ಇಟ್ಟುಕೊಂಡು ಹಾಗೆ ಬದುಕುತ್ತಿರುವುದು ನಿಜಕ್ಕೂ ಮೆಚ್ಚುವಂತದ್ದು.
ರಜನಿಕಾಂತ್ ರಾಜ್ಕುಮಾರರ ಅಪ್ಪಟ ಅಭಿಮಾನಿ, ರಾಜ್ಕುಮಾರರನ್ನು ಬಾಯ್ತುಂಬಾ ಹೊಗಳಿದ್ದನ್ನು, ಅವರ ನಟನೆ ಮುಂದೆ ನನ್ನ ನಟನೆ ಏನೂ ಇಲ್ಲ ಎಂದು ಹೇಳಿದ್ದನ್ನು ಯೂಟ್ಯೂಬ್ನಲ್ಲಿ ನೋಡಬಹುದು. ಆದರೂ ಕರ್ನಾಟಕದಲ್ಲಿ ರಾಜ್ಕುಮಾರರ ಅಭಿಮಾನಿಗಳ ಸಂಖ್ಯೆ ಕಡಿಮೆ. ಇದಕ್ಕೆ ಮೊದಲ ಕಾರಣ ನಮ್ಮ ಜನಕ್ಕೆ ಆ ಕ್ರೇಜ್ ಇಲ್ಲ. ಒಬ್ಬ ಸಿನಿಮ ಹೀರೋನ ಸಿನಿಮದಲ್ಲಿ ನೋಡಿ ಮೂರು ದಿನದ ನಂತರ ಮರೆತುಬಿಡುತ್ತಾರೆ. ಆದರೆ ತ.ನಾ ಆ.ಪ್ರ ಗಳಲ್ಲಿ ಹಾಗಿಲ್ಲ. ಅವರ ಸಿನಿಮ ನಟರ, ರಾಜಕೀಯ ವ್ಯಕ್ತಿಗಳ ಮೇಲಿನ ಅಭಿಮಾನ ನಮಗಿಂತ ನೂರು, ಸಾವಿರ ಪಟ್ಟು ಹೆಚ್ಚು. ಆದಾಗಿಯೂ ಕೆಲವೊಮ್ಮೆ ಸಣ್ಣದಾಗಿ ಚರ್ಚೆ ನಡೆಯುತ್ತಿರುತ್ತದೆ, ಆಗ ರಾಜ್ಕುಮಾರರ ವಯಕ್ತಿಕ ವಿಷಯವನ್ನು ಎಳೆಯುತ್ತಾರೆ. ನನಗೆ ಅರ್ಥವಾಗದಿದ್ದು ಅದೇ, ಸಿನಿಮ ನಟರ ವಯಕ್ತಿಕ ವಿಚಾರಗಳನ್ನು ತಂದು ಆತನ ಸಿನಿಮಾಗಳನ್ನು ನೋಡದಿರುವುದು ಅಥವಾ ಹುಚ್ಚೆದ್ದು ನೋಡುವುದು ತಪ್ಪಾಗುತ್ತದೆ.
ರಜನಿಯ ವಿಚಾರದಲ್ಲೂ ಅಷ್ಟೆ, ಅತಿ ಹೆಚ್ಚು ಫ್ಯಾಂಟಸಿ, ಹೀರೋಯಿಸಂ ಅನ್ನು ಬಯಸುವ ತ.ನಾ ನ ಜನತೆಗೆ, ರಜನಿಯ ಚಿತ್ರ ವಿಚಿತ್ರ ಸ್ಟಂಟುಗಳು, ರೋಮಗಳನ್ನು ಎಬ್ಬಿಸುವ ಆರ್ಭಟದ ಡೈಲಾಗುಗಳು, ಅಸಾಧಾರಣವಾಗಿ ನಡೆಯುವ ರೀತಿ ಹುಚ್ಚೆಬ್ಬಿಸಿತು, ಆತನನ್ನು ಆರಾಧಿಸಲು ಪ್ರಾರಂಭಿಸಿದರು. ಅಲ್ಲಿಯ ಜನರ ಮನಸ್ಥಿತಿಗೆ, ಅವರ ರುಚಿಗೆ ಆತ ದೈವನಾದ. ರಜನಿಕಾಂತರೂ ಕೂಡ ಅವರ ಅಭಿಮಾನವನ್ನು ಉಳಿಸಿಕೊಂಡರು, ಸ್ಟಾರ್ ಗಿರಿಯು ತಲೆಗೆ ಏರಿಸಿಕೊಳ್ಳದೆ, ಸರಳತೆಯನ್ನು ಮೆರೆದರು. ಎಷ್ಟೋ ಸಹಾಯಗಳನ್ನು ಮಾಡಿದರು. ಇದನ್ನು ನೋಡುತ್ತಿದ್ದ ಕರ್ನಾಟಕದ ಜನತೆಗೆ, ಎಲ್ಲೋ ಮೂಲೆಯಲ್ಲಿ ಅವನ ನಟನೆ ವಿಚಿತ್ರವೆನಿಸಿದರೂ ಅವನ ಅಭಿಮಾನಿಗಳ ಕ್ರೇಜ್ ಇವರಲ್ಲೂ ಒತ್ತಾಯವಾಗಿ ಹರಿದಾಡಲು ಪ್ರಾರಂಭಿಸಿತು. ಇದಕ್ಕೆ ಜನ ಮರಳೋ ಜಾತ್ರೆ ಮರಳೋ ಎನ್ನುವುದು. ನಿಮಗೆ ಗೊತ್ತಿರಬಹುದು, ತ.ನಾ ಜನ ಕರ್ನಾಟಕದ ಹಲವೆಡೆ ವಾಸವಾಗಿದ್ದಾರೆ. ಭದ್ರಾವತಿ, ಶಿವಮೊಗ್ಗದಲ್ಲಂತೂ ಕೆಲವು ಹಳ್ಳಿಗಳು ಕರ್ನಾಟಕದಲ್ಲಿ ಇದಾವಾ ಎಂಬ ಪ್ರಶ್ನೆ ಮೂಡಿಸುವಷ್ಟು ತಮಿಳುಮಯವಾಗಿವೆ. ಅಂಕಿ ಅಂಶಗಳ ಪ್ರಕಾರ ತ.ನಾನಲ್ಲಿ ಕನ್ನಡ ಮಾತಾಡುವವರಿಗಿಂತ ಎರಡರಷ್ಟು ಕರ್ನಾಟಕದಲ್ಲಿ ತಮಿಳು ಮಾತಾಡುವವರಿದ್ದಾರೆ. ಅವರು ರಜನಿಯ ಚಿತ್ರಗಳನ್ನು ನೋಡಿ ಕುಣಿದಾಡುತ್ತಿದ್ದ ರೀತಿ ನೋಡಿ ಸ್ವಲ್ಪ ವಿರೋಧಿಸಿದರೆ ರಜನಿಯ ವಯಕ್ತಿಕ ಜೀವನವನ್ನು ತಂದಿಟ್ಟು ಅವನನ್ನು ಹೀರೋ ಎಂದು ಬಿಂಬಿಸಿ ವಿರೋಧಿಸಲು ಬಂದವರ ಬಾಯಿ ಮುಚ್ಚಿಸುತ್ತಾರೆ. ಉಪೇಂದ್ರ ಹೇಳಿದ್ದು ನಿಜ ನಾವು ಕನ್ನಡಿಗರಲ್ಲವೋ ವಿಶಾಲ ಹೃದಯದವರು.
ಇನ್ನು ಒಂದು ರೀತಿ ಅಭಿಮಾನಿಗಳಿದ್ದಾರೆ, ಸಿನಿಮಾವನ್ನು ಮನೋರಂಜನೆಗಾಗಿ ನೋಡುತ್ತೇವೆ, ಫ್ಯಾಂಟಸಿ ಇಷ್ಟ, ಅದರಲ್ಲಿ ನ್ಯೂಟನ್ ನ ಪ್ರಮೇಯಗಳನ್ನು ಹುಡುಕುವುದು ತಪ್ಪು ಎಂದು, ಹಾಗಾದರೆ ಅವರ ಸಿನಿಮಾದಲ್ಲಿ ಸಮಾಜಕ್ಕೆ ಸಂದೇಶ ಇದೆ ಎಂಬ ಮಾತನ್ನು ಯಾಕೆ ಹೇಳುತ್ತಾರೆ? ಮನೋರಂಜನೆಗಾಗಿ ನೋಡುವವರಿಗೆ ಸಮಾಜಕ್ಕೆ ಸಂದೇಶ ಕೊಡುತ್ತದೋ ಇಲ್ಲವೋ ಏಕೆ ಬೇಕು? ಇರಲಿ, ನೈಜತೆ ಬೇಡ, ನೈಜತೆಗೆ ಕಾಲುಭಾಗವಾದರೂ ಇರಬೇಕು ಅಲ್ಲವೇ? ಸಿನಿಮೀಯ ಎಂದು ಆತನ ಸ್ಟಂಟ್ಸ್, ಸ್ಟೈಲ್, ಡೈಲಾಗ್ ಡೆಲಿವರಿ ವಿಪರೀತವಾದರೂ ಮೆಚ್ಚುವುದು ಯಾವ ನ್ಯಾಯ? ಬೆಳಗ್ಗೆ ಬೆಳಗ್ಗೆ ವಾಚಿಂಗ್ ಕಬಾಲಿ ಅಂತ ಹಾಕಿಕೊಂಡರೀತಿಯಲ್ಲಿ ವಾಚಿಂಗ್ ರಂಗೀತರಂಗ, ಲೂಸಿಯ, ಗೋ.ಬ.ಸಾ.ಮೈ ಅಂತೆಲ್ಲಾ ಹಾಕಿಕೊಂಡಿದ್ದು ನೋಡಿಲ್ಲ. ತ.ನಾ ಜನರ ಕ್ರೇಜ್ ನಮ್ಮಲ್ಲಿ ಟ್ರಾನ್ಸ್ ಫಾರ್ಮ್ ಆಗಿದೆಯೇ ಹೊರೆತು, ನಮ್ಮಲ್ಲಿ ಎಲ್ಲೋ ಮೂಲೆಯಲ್ಲಿ ಅವನ ನಟನೆ, ಸಿನಿಮಾ ಶೈಲಿಯನ್ನು ನೋಡಿ ನಗು ಬರುವುದಂತು ಸತ್ಯ. ನೀವು ಎಷ್ಟೇ ಚೆನ್ನಾಗಿರೋ ಸಿನಿಮಾ ಮಾಡಿ, ನಮ್ಮ ನಟರ ಮೇಲೆ ಆ ಕ್ರೇಜ್ ಬರುವುದಿಲ್ಲ, ಏಕೆಂದರೆ ಮೂಲತಹ ನಾವು ಕ್ರೇಜ್ ಬೆಳೆಸಿಕೊಳ್ಳುವವರಲ್ಲ. ಕ್ರೇಜ್ ಹುಟ್ಟುವುದು, ಹುಚ್ಚೆದ್ದು ಅಭಿಮಾನ ತೋರಿಸುವವರನ್ನು ನೋಡಿದಾಗ. ನಮ್ಮವರ ಮೇಲೆ ಬಾರದ ಕ್ರೇಜ್ ಆ ನಟರ ಮೇಲೆ ಬಂದಿದೆಯೆಂದರೆ ಇದು ನಮಗೆ ತ.ನಾ ನ ಜನರನ್ನು ನೋಡಿ ಬಂದಿರುವ ಕ್ರೇಜ್ ಅಷ್ಟೇ. ಜನ ಮರಳೋ ಜಾತ್ರೆ ಮರಳೋ ಎಂಬಂತೆ.
ಕೊನೆಯದಾಗಿ ರಜನಿಯವರೇ ರಾಜ್ಕುಮಾರರ ಕುರಿತು ಹೇಳಿದ ಪ್ರಸಂಗವನ್ನು ಹೇಳ್ಬೇಕೆಂದೆನಿಸಿದೆ.
ರಜನಿ ಮತ್ತು ರಾಜಣ್ಣ ಹೋಗುತ್ತಿದ್ದ ಕಾರು ಕೆಟ್ಟು ನಿಂತಾಗ ರಾಜಣ್ಣನನ್ನು ನೋಡಿ ಎಲ್ಲರೂ ನಮಸ್ಕಾರ ಮಾಡಿದರಂತೆ, ಕಾರಿನಲ್ಲಿ ಮುಂದೆ ಹೊರಟಾಗ ರಾಜಣ್ಣ ರಜನಿಗೆ ಹೇಳಿದರಂತೆ, ನೋಡಿದಿರಾ ಎಷ್ಟೋಂದು ಮರ್ಯಾದೆ ಅಂತ. ರಜನಿ ನಿಮಗಲ್ಲದೆ ಬೇರೆಯಾರಿಗೆ ಕೊಡುತ್ತಾರೆ ಅಂದಾಗ, ಹುಚ್ಚಪ್ಪಾ ನನಗಲ್ಲ ಕೊಟ್ಟಿದ್ದ್ದು ಮರ್ಯಾದೆ, ನನ್ನಲ್ಲಿರೋ ಸರಸ್ವತಿಗೆ ಎಂದರಂತೆ ರಾಜಣ್ಣ. ರಜನಿಯ ವಯಕ್ತಿಕ ಜೀವನ ಇಷ್ಟೋಂದು ಸರಳವಾಗಿರುವುದಕ್ಕೆ ರಾಜಣ್ಣ ಆದರ್ಶವೇ ಕಾರಣವಿದ್ದರೂ ಇರಬಹುದು.
ಸಾರಾಂಶ ಇಷ್ಟೇ, ನಟನೆಯ ವಿಷಯದಲ್ಲಿ ರಜನಿಕಾಂತರ ನಟನೆ ನನಗೆ ಸ್ವಲ್ಪವೂ ಹಿಡಿಸಲಿಲ್ಲ. ಹಾಗಂತ ನಿಮಗೂ ಹಿಡಿಸಬಾರದೆಂದು ಯಾವ ಒತ್ತಡವೂ ಮಾಡುವುದಿಲ್ಲ. ಲೋಕೋ ಭಿನ್ನ ರುಚಿಃ.