ನಮ್ಮೂರ ಹೆಸರು ಕೇಳಿದಾಗಲೇ ಹಬ್ಬದ ಅನುಭವವಾಗುತ್ತದೆ ಇನ್ನು ನಮ್ಮೂರ ಹಬ್ಬದ ಬಗ್ಗೆ ಹೇಳಬೇಕೆಂದರೆ ಹಬ್ಬಕ್ಕಿಂತ ದೊಡ್ಡ ಪದ ಹುಡುಕಬೆಕಾಗುತ್ತದೆ. ನನ್ನೂರು ಶಿಕಾರಿಪುರ. ಹೊನ್ನಾಳಿ, ಶಿವಮೊಗ್ಗ ಈಗ ದಾವಣಗೆರೆಯಲ್ಲಿ ವಾಸವಿದ್ದರೂ ನನಗೆ ಶಿಕಾರಿಪುರವೇ ನನ್ನೂರು ಎಂದೆನಿಸುತ್ತದೆ. ಉಳಿದವುಗಿಂತ ಸ್ವಲ್ಪ ಅಭಿಮಾನ ಹೆಚ್ಚು. ನನ್ನ ಬಾಲ್ಯ ಕಳೆದದ್ದು ಅಲ್ಲಿಯೇ ಇದಕ್ಕೆ ಮೂಲ ಕಾರಣವಿರಬಹುದು. ಯಾವುದೇ ಅಹಂ ಇಲ್ಲದೇ ಬಲಿತ(ಮೆಚ್ಯೂರ್ಡ್) ಮನಸಿಲ್ಲದೇ ಎಲ್ಲರ ಜೊತೆ ಬೆರೆತು ಕಾಲ ಕಳೆಯುತ್ತಿದುದರಿಂದ ಬಾಲ್ಯದ ಜೊತೆ ಸವಿನೆನಪು ಪದ ಉಚಿತವಾಗಿ ಬರುತ್ತದೆ ಎಂದೆನಿಸುತ್ತದೆ. ಈಗ ಹಬ್ಬದ ವಿಷಯಕ್ಕೆ ಬರೋಣ.
ಅಲ್ಲಿ ನಡೆಯುತ್ತಿದ್ದದ್ದು ಮಾರಿ ಹಬ್ಬ ಜೊತೆಗೆ ಹುಚ್ಚಪ್ಪನ ಜಾತ್ರೆ. ನಾನೀಗ ಹೇಳಹೊರಟಿರುವುದು ಹುಚ್ಚಪ್ಪನ ಜಾತ್ರೆಯ ಬಗ್ಗೆ. ಹುಚ್ಚಪ್ಪ ಅಥವಾ ಹುಚ್ಚುರಾಯ ಎಂದರೆ ಹನುಮಂತ ದೇವರ ಹೆಸರು. ನಮ್ಮ ಧರ್ಮದಲ್ಲಿರೋ ಸುಂದರ ವಿಷಯವೇ ಅದು- ದೇವರ ಜೊತೆ ಸಲಿಗೆ ಜಾಸ್ತಿ. ಹುಚ್ಚಪ್ಪ, ಕಿಟ್ಟಣ್ಣ ಹೀಗೆ ಪ್ರೀತಿಯಿಂದ ಕರೆಯುತ್ತೇವೆ. ಶಿಕಾರಿಪುರದ ಹನುಮಪ್ಪನನ್ನು ಸ್ಥಾಪಿಸಿದ್ದು ವ್ಯಾಸರಾಯರು. ಅವನಿಗೆ ಭ್ರಾಂತೇಶನೆಂದೂ ಕರೆಯುತ್ತಾರೆ. ಭ್ರಾಂತೇಶ, ಶಾಂತೇಶ(ಸಾತೇನಹಳ್ಳಿ) ಹಾಗೂ ಕಾಂತೇಶ(ಕದಲಮಂಡಗಿ) ಈ ಮೂರು ಹನುಮಪ್ಪನನ್ನು ಒಂದೇ ದಿನ ನೋಡಬೇಕೆಂದು ವಾಡಿಕೆಯಿದೆ. ಈ ಹನುಮಪ್ಪನದ್ದೂ ಒಂದು ಕತೆಯಿದೆ, ಅಗಸನಿಗೆ ಕನಸಿನಲ್ಲಿ ಇಲ್ಲಿಯ ಕೆರೆಯಲ್ಲಿ ನೀನು ಬಟ್ಟೆ ಒಗೆಯುವ ಕಲ್ಲಿನ ಕೆಳಗೆ ನಾನಿದ್ದೇನೆ ಎಂದು ಹನುಮಪ್ಪ ಹೇಳಿದನಂತೆ, ನೋಡಿದರೆ ಅದು ಸತ್ಯವಿತ್ತಂತೆ ನಂತರ ಅದನ್ನು ಸ್ಥಾಪಿಸಿದರಂತೆ ಎಂದು ಒಂದು ಕತೆ. ಈ ಹನುಮಪ್ಪನ ಹಣೆಯ ಮೇಲೆ ಸಾಲಿಗ್ರಾಮವಿದೆ. ಹನುಮಂತ ದುಷ್ಟಶಕ್ತಿಗಳನ್ನು ಕಾಪಾಡುವವನಾದ್ದರಿಂದ ಆತನನ್ನು ಹಿಂದೆ ಊರ ಬಾಗಿಲಲ್ಲಿ ಪ್ರತಿಷ್ಠಾಪಿಸುತ್ತಿದ್ದರಂತೆ. ಈಗ ಹಲವು ಕಡೆ ಊರು ಬೆಳೆದು ಟ್ರಾಫಿಕ್ಕಿನಲ್ಲಿ ಸಿಕ್ಕ ಗಾಡಿಯಂತಾಗಿದ್ದಾನೆ ಹನುಮಪ್ಪ. ಆದರೆ ಶಿಕಾರಿಪುರದಲ್ಲಿ ಈಗಲೂ ಊರ ಬಾಗಿಲಲ್ಲಿ ನಿಂತು ದುಷ್ಟ ಶಕ್ತಿಗಳ ಹಲ್ಲು ಮುರಿವೆಯೆಂದು ನಿಂತಿದ್ದಾನೆ. ಇಷ್ಟು ದೇವಸ್ಥಾನದ ಹಿನ್ನಲೆ.
ಈ ಹುಚ್ಚಪ್ಪನಿಗೆ ಉತ್ಸವ ನಡೆಯುವುದು ಚೈತ್ರ ಶುದ್ಧ ಹುಣ್ಣಿಮೆಯಂದು. ಅದನ್ನು ದವನದ ಹುಣ್ಣಿಮೆಯೆಂದೂ ಕರೆಯುತ್ತಾರೆ. ಅಂದು ಹನುಮ ಜಯಂತಿ. ಹಾಗಾಗಿ ಹನುಮನಿಗೆ ಮೂರು ದಿನ ರಥೋತ್ಸವ ಹಾಗು ನಾಲ್ಕನೇ ದಿನ ತೆಪ್ಪೋತ್ಸವ ಜರುಗುತ್ತದೆ. ಜಾತ್ರೆಗೆ ತಯಾರಿ ಪ್ರಾರಂಭವಾಗುವುದು ಯುಗಾದಿಯಿಂದ ಅಂದರೆ ಹದಿನೈದು ದಿನಗಳ ಮುಂಚಿತವಾಗಿ. ಯುಗಾದಿಯಂದು ದೇವಸ್ಥಾನದೆದುರು ತಗಡಿನ ಶೆಡ್ಡಿನಲ್ಲಿ ಬಚ್ಚಿಟ್ಟಿದ್ದ ರಥಗಳನ್ನು ಹೊರತೆಗೆದಿಡುತ್ತಿದ್ದರು. ಮಳೆಗಾಲ ಚಳಿಗಾಲವನ್ನೇ ಕಾಣದ ಈ ರಥಗಳು ಬೇಸಿಗೆಗಾಲದಲ್ಲಿ ಸುಡುವ ಬಿಸಿಲನ್ನು ಕಾಣಲು ಹೊರಬರುತ್ತಿದ್ದವು. ಸದಾ ಎಳ್ಳೆಣ್ಣೆ, ಸುಗಂಧರಾಜ ಹೂವು ಅಥವ ಊದುಬತ್ತಿಯ ವಾಸನೆಯಿಂದ ಕೂಡಿರುತ್ತಿದ್ದ ದೇವಸ್ಥಾನ ಸುಣ್ಣ-ಬಣ್ಣದ ವಾಸನೆ ಸೂಸಲು ಪ್ರಾರಂಭಿಸುತಿತ್ತು. ಬೇಸಿಗೆಗೆ ಅಲ್ಪ ಸ್ವಲ್ಪ ನೀರಿರುತ್ತಿದ್ದ ಕೆರೆಯಲ್ಲಿ ಶುದ್ಧೀಕರಣ ಜೋರಾಗಿಯೇ ನಡೆಯುತ್ತಿತ್ತು. ಇತ್ತ ಹೊರ ಬಂದ ರಥಗಳಿಗೆ ತೈಲಮರ್ಜನ, ಗಾಲಿಯ ಕೀಲುಗಳಿಗೆ ಮರುಜೀವ ಹೀಗೆ ಮೂರು ದಿನಗಳ ಮ್ಯಾರಾಥಾನ್ಗೆ ತಯಾರಿ ಮಾಡುತ್ತಿದ್ದರು. ಆದರೆ ನಾವೆಲ್ಲಾ ಕಾಯುತ್ತಿದ್ದುದ್ದು ಬೇರೊಂದಕ್ಕಾಗಿ, ಅಲ್ಲಿಯೇ ದೇವಸ್ಥಾನದ ಹಿಂಭಾಗದಲ್ಲಿ ಇದ್ದ ಸಣ್ಣ ಜಾಗದಲ್ಲಿ ಯಾವ ರೀತಿಯ ಆಟ ಆಡುವ ದೈತ್ಯ ಚಕ್ರಗಳು, ತಿರುಗುವ ಕುರ್ಚಿಗಳು, ಕುದುರೆ, ಕಾರುಗಳನ್ನು ಹಾಕುತ್ತಿದ್ದಾರೆ ಎಂಬುದರ ಕಡೆ ಗಮನ. ತುಂಬಾ ತಯಾರಿ ಬೇಕಾದ್ದರಿಂದ ಅವರು ಮುಂಚೆಯೇ ಬಂದಿರುತ್ತಿದ್ದರು. ನಂತರ ಇನ್ನೇನು ಹುಣ್ಣಿಮೆಗೆ ಕೆಲವೇ ದಿನಗಳು ಬಾಕಿಯಿರುವಾಗ, ಮೊದಲ ಮಳೆಗೆ ಚಿಗುರುವ ಎಲೆಗಳಂತೆ ರಥಬೀದಿಯಲ್ಲೆಲ್ಲಾ ಅಂಗಡಿಗಳು ತಲೆಯೆತ್ತತೊಡಗುತ್ತಿದ್ದವು.
ಜಾತ್ರೆ ಪ್ರಾರಂಭವಾದರೆ, ನಮ್ಮ ಕಣ್ಣು ಅಂಗಡಿಯಲ್ಲಿ ಮೇಲುಗಡೆ ಇಡುತ್ತಿದ್ದ ರಿಮೋಟ್ ಕಾರ್, ದೊಡ್ಡ ದೊಡ್ಡ ಗನ್ನುಗಳಕಡೆಯಾದರೆ, ಹುಡುಗಿಯರ ಕಣ್ಣು ತೂಗು ಬಿಡುತ್ತಿದ್ದ ಸರ, ಸಾಲಾಗಿ ಜೋಡಿಸಿಟ್ಟಿದ್ದ ಬಳೆಗಳ ಕಡೆಗೆ. ಇಡೀ ಅಂಗಡಿಯನ್ನು ಕೊಂಡುಕೊಳ್ಳಬೇಕೆನ್ನುವಷ್ಟು ತವಕ ಆದರೆ ಕೊನೆಗೆ ಹಳೇಯ ಡಬ್ಬಿಯಲ್ಲಿ ಕೂಡಿಟ್ಟಿದ್ದ ದುಡ್ಡಿನಲ್ಲಿ ಒಂದು ಸಣ್ಣ ಸಿನಿಮಾ ನಟ ನಟಿಯರನ್ನು ನೋಡಬಹುದಾದಂತಾ ಕ್ಯಾಮರ ತೆಗೆದುಕೊಂಡು ದಾರಿಯತುಂಬೆಲ್ಲಾ ನಮ್ಮ ಫೋಟೋಗ್ರಾಫಿಯ ಕರಾಮತ್ತನ್ನು ತೋರಿಸುತ್ತಾ ಬಂದ ನೆನಪು. ಮಾರನೇ ದಿನ ಅಮ್ಮನನ್ನು ಕಾಡಿ ಬೇಡಿ ಗನ್ನು ತೆಗೆದುಕೊಳ್ಳುತ್ತೇನೆಂದು ಹೋಗಿ ಅಂಗಡಿ ಮುಂದೆ ಗೊಂದಲ ಉಂಟಾಗಿ ಊದುವ ಕೊಳಲನ್ನು ತಂದು ಹರಿಪ್ರಸಾದ್ ಚೌರಾಸಿಯ ಅಥವ ಪ್ರವೀಣ್ ಗೋಡ್ಕಿಂಡಿಯಂತೆ ಊದುತ್ತಿದ್ದದ್ದೂ ಉಂಟು. ಊದಿ ಊದಿ ಗಲ್ಲ ನೋವಾದಾಗ ಗನ್ನು ತೆಗೆದುಕೊಳ್ಳಬೇಕಿತ್ತೇನೋ ಎಂದು ಪೇಚಾಡಿದ್ದೂ ಉಂಟು. ದೇವಸ್ಥಾನಕ್ಕೆಂದು ಮನೆಯಿಂದ ಹೊರಟರೆ ದಾರಿಯುದ್ದಕ್ಕೂ ಕಾಣಸಿಗುತ್ತಿದ್ದ ಅಂಗಡಿಗಳನ್ನು ಕಣ್ಣಿನಲ್ಲೇ ದೋಚಿಕೊಂಡು ಹೋಗುತ್ತಿದ್ದೆ. ಹುಡುಗಿಯರ ಕೈಯಲ್ಲಿ ಬಳೆ, ಸರಗಳು, ಉಗುರು ಬಣ್ಣ, ರಿಬ್ಬನ್ ಈ ರೀತಿ ಅಲಂಕಾರಿಕ ವಸ್ತುಗಳೇ ಜಾಸ್ತಿ ಕಾಣುತ್ತಿದ್ದವು. ಇನ್ನೂ ಒಂದು ವಿಭಾಗವಿದೆ. ತಿಂಡಿ ತಿನಿಸುಗಳು. ಖಾರ ಮಂಡಕ್ಕಿ, ಬೆಂಡು ಬತ್ತಾಸು, ಜಿಲೇಬಿ, ಬಿಸಿ ಬಿಸಿ ಅಂಬೋಡೆ ಆಹಾ ಬಾಯಲ್ಲಿ ನೀರು ಜಿನುಗುತ್ತದೆ. ಬಲೂನಿನ ವಾಸನೆ, ಮುಡಿದ ಮಲ್ಲಿಗೆಯ ವಾಸನೆ, ಮಿರ್ಚಿ ಅಂಬೋಡೆಯ ವಾಸನೆಯ ನಡುವೆ ತೇರಿಗೆ ಹಚ್ಚಿದ್ದ ಹರಳೆಣ್ಣೆಯ ವಾಸನೆ ದೇವರನ್ನು ನೆನಪಿಸಿತು.
ಹುಚ್ಚಪ್ಪನ ಜಾತ್ರೆಯಲ್ಲಿ ಮೂರು ರಥಗಳನ್ನು ಎಳಿಯುತ್ತಿದ್ದರು. ಒಟ್ಟು ಎರಡು ರಥಗಳಿದ್ದವು. ತ್ರಯೋದಶಿಯಂದು ರಾತ್ರಿ ದೀಪಾಲಂಕೃತ ರಥ, ಚತುರ್ದಶಿಯಂದು ಹೂವುಗಳಿಂದ ಅಲಂಕೃತ ರಥ ಹಾಗು ಹುಣ್ಣಿಮೆಯಂದು ಬಾವುಟಗಳಿಂದ ಕೂಡಿರುತ್ತಿದ್ದ ದೊಡ್ಡ ರಥ ಅಥವಾ ಬ್ರಹ್ಮರಥೋತ್ಸವ. ಮೊದಲೆರಡು ರಥಗಳನ್ನು ರಾತ್ರಿಯ ವೇಳೆ ಎಳಿಯುತ್ತಿದ್ದರು. ತೇರುಬೀದಿಯ ತುಂಬೆಲ್ಲಾ ಜಗಮಗ ದೀಪಗಳಿಂದ ತುಂಬಿದ್ದ ಅಂಗಡಿಗಳು, ಅದರ ಮಧ್ಯೆಯಲ್ಲಿ ದೀಪಾಲಂಕೃತ ತೇರು ಬರುತ್ತಿದ್ದರೆ, ಅಂಗಡಿಯ ದೀಪಗಳನ್ನೆಲ್ಲಾ ಅಯಸ್ಕಾಂತದಂತೆ ತನ್ನ ಕಡೆ ಎಳೆದುಕೊಳ್ಳುತ್ತಿದೆಯೇನೋ ಎಂದೆನಿಸುತಿತ್ತು. ಹುಣ್ಣಿಮೆಯ ದಿನ ಬ್ರಹ್ಮ ರಥೋತ್ಸವ ಜನರು ಎಲ್ಲಿಲ್ಲದ ಸಡಗರ, ಬೀದಿಯಲ್ಲಿ ಕಾಲಿಡಲು ಸಾದ್ಯವಾಗದಷ್ಟು ಜನಸಾಗರ. ಸುತ್ತಮುತ್ತಲಿನ ಹಳ್ಳಿಗಳಿಂದ ಎತ್ತಿನ ಗಾಡಿ ಕಟ್ಟಿಕೊಂಡು ಬರುತಿದ್ದರು. ಒಂಬತ್ತು ತಿಂಗಳ ತುಂಬು ಗರ್ಭಿಣಿಯಂತೆ ನಿಧಾನವಾಗಿ ಅತ್ತಿಂದಿತ್ತ ಅಲುಗಾಡುತ್ತಾ ನಿಧಾನವಾಗಿ ತೇರು ಬರುತಿದ್ದರೆ, ಕೆಳಗಿನಿಂದ ಬಾಳೆ ಹಣ್ಣು, ಹೂವು, ದವನ ಎಸೆದು ಕೈಮುಗಿದು ಧನ್ಯತಾ ಮನೋಭಾವದಿಂದ ಹನುಮಪ್ಪನಿಗೆ ವಂದಿಸುತಿದ್ದರು. ಭಕ್ತಿಯ ಬಗ್ಗೆ ಅಷ್ಟೇನು ಅರಿಯದ ವಯಸ್ಸು ನನ್ನದು, ನಾವಂದು ತೂರಿದ ಬಾಳೆ ಹಣ್ಣನ್ನು ಗಾಲಿಯ ಪಕ್ಕ ಹತ್ತಿ ನಿಂತಿದ್ದ ಭಟ್ಟರ ತಲೆಗೆ ತಾಕಿದಾಗ ಗುಸು ಗುಸು ನಕ್ಕಿದ್ದು ಉಂಟು. ಮತ್ತೆ ಯಾರೋ ತೂರಿದ ಬಾಳೆಹಣ್ಣನ್ನು ಹಿಡಿದು ಮತ್ತೆ ತೂರುತ್ತಾ ಕಪೀಶನ ಮುಂದೆ ನಮ್ಮ ಕಪಿ ಚೇಷ್ಟೆ ಜೋರಾಗಿಯೇ ನಡೆಯುತಿತ್ತು.
ನಮ್ಮ ಬಾಲ್ಯದ ಆ ಜಾತ್ರೆಯ ದಿನಗಳನ್ನು ಎಷ್ಟು ನೆನಪಿಸಿಕೊಂಡರೂ ಸಾಲದು. ನಮ್ಮ ಆಚರಣೆಗಳೇ ಹಾಗೆ. ಎಲ್ಲರೊಂದಿಗೆ ಸೇರಿ ನಮ್ಮೆಲ್ಲಾ ದುಃಖಗಳನ್ನು ಮರೆತು ಸಂಭ್ರಮದಿಂದ ಕಳೆಯಲು ಸಹಾಯ ಮಾಡುತ್ತವೆ. ಈಗಿನ ಮಕ್ಕಳಿಗೆ ಯಾವುದಾದರೂ ಎಕ್ಸಿಬಿಷನ್ಗೆ ಕರೆದುಕೊಂಡು ಹೋಗಿ ಏನನ್ನಾದರೂ ತಿನಿಸಿ ಸ್ವಲ್ಪ ಆಟ ಆಡಿಸಿ ಕರೆದುಕೊಂಡು ಬರುತ್ತಾರೆ, ಆದರೆ ಅಲ್ಲಿ ಆ ಜಾತ್ರೆಯ ಸೊಬಗಿರುವುದಿಲ್ಲ, ದೇವರ ಕಲ್ಪನೆ ಭಕ್ತಿ ಎಂಬುದಿರುವುದಿಲ್ಲ. ನಮ್ಮ ಆಚರಣೆ ನಮ್ಮ ಹೆಮ್ಮೆ, ಸಾದ್ಯವಾದಷ್ಟು ಉಳಿಸಿಕೊಳ್ಳೋಣ.

ಈ ಹುಚ್ಚಪ್ಪನಿಗೆ ಉತ್ಸವ ನಡೆಯುವುದು ಚೈತ್ರ ಶುದ್ಧ ಹುಣ್ಣಿಮೆಯಂದು. ಅದನ್ನು ದವನದ ಹುಣ್ಣಿಮೆಯೆಂದೂ ಕರೆಯುತ್ತಾರೆ. ಅಂದು ಹನುಮ ಜಯಂತಿ. ಹಾಗಾಗಿ ಹನುಮನಿಗೆ ಮೂರು ದಿನ ರಥೋತ್ಸವ ಹಾಗು ನಾಲ್ಕನೇ ದಿನ ತೆಪ್ಪೋತ್ಸವ ಜರುಗುತ್ತದೆ. ಜಾತ್ರೆಗೆ ತಯಾರಿ ಪ್ರಾರಂಭವಾಗುವುದು ಯುಗಾದಿಯಿಂದ ಅಂದರೆ ಹದಿನೈದು ದಿನಗಳ ಮುಂಚಿತವಾಗಿ. ಯುಗಾದಿಯಂದು ದೇವಸ್ಥಾನದೆದುರು ತಗಡಿನ ಶೆಡ್ಡಿನಲ್ಲಿ ಬಚ್ಚಿಟ್ಟಿದ್ದ ರಥಗಳನ್ನು ಹೊರತೆಗೆದಿಡುತ್ತಿದ್ದರು. ಮಳೆಗಾಲ ಚಳಿಗಾಲವನ್ನೇ ಕಾಣದ ಈ ರಥಗಳು ಬೇಸಿಗೆಗಾಲದಲ್ಲಿ ಸುಡುವ ಬಿಸಿಲನ್ನು ಕಾಣಲು ಹೊರಬರುತ್ತಿದ್ದವು. ಸದಾ ಎಳ್ಳೆಣ್ಣೆ, ಸುಗಂಧರಾಜ ಹೂವು ಅಥವ ಊದುಬತ್ತಿಯ ವಾಸನೆಯಿಂದ ಕೂಡಿರುತ್ತಿದ್ದ ದೇವಸ್ಥಾನ ಸುಣ್ಣ-ಬಣ್ಣದ ವಾಸನೆ ಸೂಸಲು ಪ್ರಾರಂಭಿಸುತಿತ್ತು. ಬೇಸಿಗೆಗೆ ಅಲ್ಪ ಸ್ವಲ್ಪ ನೀರಿರುತ್ತಿದ್ದ ಕೆರೆಯಲ್ಲಿ ಶುದ್ಧೀಕರಣ ಜೋರಾಗಿಯೇ ನಡೆಯುತ್ತಿತ್ತು. ಇತ್ತ ಹೊರ ಬಂದ ರಥಗಳಿಗೆ ತೈಲಮರ್ಜನ, ಗಾಲಿಯ ಕೀಲುಗಳಿಗೆ ಮರುಜೀವ ಹೀಗೆ ಮೂರು ದಿನಗಳ ಮ್ಯಾರಾಥಾನ್ಗೆ ತಯಾರಿ ಮಾಡುತ್ತಿದ್ದರು. ಆದರೆ ನಾವೆಲ್ಲಾ ಕಾಯುತ್ತಿದ್ದುದ್ದು ಬೇರೊಂದಕ್ಕಾಗಿ, ಅಲ್ಲಿಯೇ ದೇವಸ್ಥಾನದ ಹಿಂಭಾಗದಲ್ಲಿ ಇದ್ದ ಸಣ್ಣ ಜಾಗದಲ್ಲಿ ಯಾವ ರೀತಿಯ ಆಟ ಆಡುವ ದೈತ್ಯ ಚಕ್ರಗಳು, ತಿರುಗುವ ಕುರ್ಚಿಗಳು, ಕುದುರೆ, ಕಾರುಗಳನ್ನು ಹಾಕುತ್ತಿದ್ದಾರೆ ಎಂಬುದರ ಕಡೆ ಗಮನ. ತುಂಬಾ ತಯಾರಿ ಬೇಕಾದ್ದರಿಂದ ಅವರು ಮುಂಚೆಯೇ ಬಂದಿರುತ್ತಿದ್ದರು. ನಂತರ ಇನ್ನೇನು ಹುಣ್ಣಿಮೆಗೆ ಕೆಲವೇ ದಿನಗಳು ಬಾಕಿಯಿರುವಾಗ, ಮೊದಲ ಮಳೆಗೆ ಚಿಗುರುವ ಎಲೆಗಳಂತೆ ರಥಬೀದಿಯಲ್ಲೆಲ್ಲಾ ಅಂಗಡಿಗಳು ತಲೆಯೆತ್ತತೊಡಗುತ್ತಿದ್ದವು.
ಜಾತ್ರೆ ಪ್ರಾರಂಭವಾದರೆ, ನಮ್ಮ ಕಣ್ಣು ಅಂಗಡಿಯಲ್ಲಿ ಮೇಲುಗಡೆ ಇಡುತ್ತಿದ್ದ ರಿಮೋಟ್ ಕಾರ್, ದೊಡ್ಡ ದೊಡ್ಡ ಗನ್ನುಗಳಕಡೆಯಾದರೆ, ಹುಡುಗಿಯರ ಕಣ್ಣು ತೂಗು ಬಿಡುತ್ತಿದ್ದ ಸರ, ಸಾಲಾಗಿ ಜೋಡಿಸಿಟ್ಟಿದ್ದ ಬಳೆಗಳ ಕಡೆಗೆ. ಇಡೀ ಅಂಗಡಿಯನ್ನು ಕೊಂಡುಕೊಳ್ಳಬೇಕೆನ್ನುವಷ್ಟು ತವಕ ಆದರೆ ಕೊನೆಗೆ ಹಳೇಯ ಡಬ್ಬಿಯಲ್ಲಿ ಕೂಡಿಟ್ಟಿದ್ದ ದುಡ್ಡಿನಲ್ಲಿ ಒಂದು ಸಣ್ಣ ಸಿನಿಮಾ ನಟ ನಟಿಯರನ್ನು ನೋಡಬಹುದಾದಂತಾ ಕ್ಯಾಮರ ತೆಗೆದುಕೊಂಡು ದಾರಿಯತುಂಬೆಲ್ಲಾ ನಮ್ಮ ಫೋಟೋಗ್ರಾಫಿಯ ಕರಾಮತ್ತನ್ನು ತೋರಿಸುತ್ತಾ ಬಂದ ನೆನಪು. ಮಾರನೇ ದಿನ ಅಮ್ಮನನ್ನು ಕಾಡಿ ಬೇಡಿ ಗನ್ನು ತೆಗೆದುಕೊಳ್ಳುತ್ತೇನೆಂದು ಹೋಗಿ ಅಂಗಡಿ ಮುಂದೆ ಗೊಂದಲ ಉಂಟಾಗಿ ಊದುವ ಕೊಳಲನ್ನು ತಂದು ಹರಿಪ್ರಸಾದ್ ಚೌರಾಸಿಯ ಅಥವ ಪ್ರವೀಣ್ ಗೋಡ್ಕಿಂಡಿಯಂತೆ ಊದುತ್ತಿದ್ದದ್ದೂ ಉಂಟು. ಊದಿ ಊದಿ ಗಲ್ಲ ನೋವಾದಾಗ ಗನ್ನು ತೆಗೆದುಕೊಳ್ಳಬೇಕಿತ್ತೇನೋ ಎಂದು ಪೇಚಾಡಿದ್ದೂ ಉಂಟು. ದೇವಸ್ಥಾನಕ್ಕೆಂದು ಮನೆಯಿಂದ ಹೊರಟರೆ ದಾರಿಯುದ್ದಕ್ಕೂ ಕಾಣಸಿಗುತ್ತಿದ್ದ ಅಂಗಡಿಗಳನ್ನು ಕಣ್ಣಿನಲ್ಲೇ ದೋಚಿಕೊಂಡು ಹೋಗುತ್ತಿದ್ದೆ. ಹುಡುಗಿಯರ ಕೈಯಲ್ಲಿ ಬಳೆ, ಸರಗಳು, ಉಗುರು ಬಣ್ಣ, ರಿಬ್ಬನ್ ಈ ರೀತಿ ಅಲಂಕಾರಿಕ ವಸ್ತುಗಳೇ ಜಾಸ್ತಿ ಕಾಣುತ್ತಿದ್ದವು. ಇನ್ನೂ ಒಂದು ವಿಭಾಗವಿದೆ. ತಿಂಡಿ ತಿನಿಸುಗಳು. ಖಾರ ಮಂಡಕ್ಕಿ, ಬೆಂಡು ಬತ್ತಾಸು, ಜಿಲೇಬಿ, ಬಿಸಿ ಬಿಸಿ ಅಂಬೋಡೆ ಆಹಾ ಬಾಯಲ್ಲಿ ನೀರು ಜಿನುಗುತ್ತದೆ. ಬಲೂನಿನ ವಾಸನೆ, ಮುಡಿದ ಮಲ್ಲಿಗೆಯ ವಾಸನೆ, ಮಿರ್ಚಿ ಅಂಬೋಡೆಯ ವಾಸನೆಯ ನಡುವೆ ತೇರಿಗೆ ಹಚ್ಚಿದ್ದ ಹರಳೆಣ್ಣೆಯ ವಾಸನೆ ದೇವರನ್ನು ನೆನಪಿಸಿತು.

ನಮ್ಮ ಬಾಲ್ಯದ ಆ ಜಾತ್ರೆಯ ದಿನಗಳನ್ನು ಎಷ್ಟು ನೆನಪಿಸಿಕೊಂಡರೂ ಸಾಲದು. ನಮ್ಮ ಆಚರಣೆಗಳೇ ಹಾಗೆ. ಎಲ್ಲರೊಂದಿಗೆ ಸೇರಿ ನಮ್ಮೆಲ್ಲಾ ದುಃಖಗಳನ್ನು ಮರೆತು ಸಂಭ್ರಮದಿಂದ ಕಳೆಯಲು ಸಹಾಯ ಮಾಡುತ್ತವೆ. ಈಗಿನ ಮಕ್ಕಳಿಗೆ ಯಾವುದಾದರೂ ಎಕ್ಸಿಬಿಷನ್ಗೆ ಕರೆದುಕೊಂಡು ಹೋಗಿ ಏನನ್ನಾದರೂ ತಿನಿಸಿ ಸ್ವಲ್ಪ ಆಟ ಆಡಿಸಿ ಕರೆದುಕೊಂಡು ಬರುತ್ತಾರೆ, ಆದರೆ ಅಲ್ಲಿ ಆ ಜಾತ್ರೆಯ ಸೊಬಗಿರುವುದಿಲ್ಲ, ದೇವರ ಕಲ್ಪನೆ ಭಕ್ತಿ ಎಂಬುದಿರುವುದಿಲ್ಲ. ನಮ್ಮ ಆಚರಣೆ ನಮ್ಮ ಹೆಮ್ಮೆ, ಸಾದ್ಯವಾದಷ್ಟು ಉಳಿಸಿಕೊಳ್ಳೋಣ.