'ಕೃಷ್ಣನ ದ್ವಾರಕೆಯೇ ಇಲ್ಲಿ ಕಂಡಹಾಗಿದೆ'
'ಆಹಾ ರಾಮರಾಜ್ಯ' 'ಇಲ್ಲಿ ಬದುಕುವುದೇ ನಮ್ಮ ಪುಣ್ಯ'
ನೆರೆದಿದ್ದ ಜನರಿಂದ ಹೀಗೆ ಯುಧಿಷ್ಠಿರನ ಇಂದ್ರಪ್ರಸ್ಥದ ಬಗ್ಗೆ ಹೊಗಳಿಕೆ ಬರುತ್ತಿದ್ದರೆ, ಇತ್ತ ಮಹಾ ಧರ್ಮಿಷ್ಠ ಯುಧಿಷ್ಠಿರ ನೆರೆದಿದ್ದ ಜನರಿಗೆಲ್ಲಾ ದಾನ ಧರ್ಮಗಳನ್ನು ಮಾಡುತ್ತಾ, ರಾಜಸೂಯ ಯಾಗಕ್ಕೆ ಆಗಮಿಸಿದ್ದ ರಾಜರುಗಳಿಗೆ ಆತಿಥ್ಯವನ್ನು ನೀಡುತ್ತಾ, ಋಷಿಗಳ, ಯತಿಗಳ ಸೇವೆಯನ್ನು ಮಾಡುತ್ತಾ ಎಲ್ಲರ ಬಾಯಲ್ಲಿ ಆಶಿರ್ವಾದವನ್ನು ಪಡೆಯುತ್ತಾ ಅಭೂತಪೂರ್ವ ರಾಜಸೂಯ ಯಾಗವನ್ನು ನಡೆಸುತ್ತಿದ್ದಾನೆ.
ಇದನ್ನೆಲ್ಲವನ್ನು ನೋಡುತ್ತಾ ಇದ್ದ ಶ್ರೀಕೃಷ್ಣ ಪರಮಾತ್ಮ ತಾನು ಸದಾ ಧರ್ಮಿಗಳ ಪರ ಎಂದು ಪದೇ ಪದೇ ನಿರೂಪಿಸುತ್ತಿರುವುನೇನೋ ಎಂಬಂತೆ ತನ್ನ ತಂಗಿಯ ಮನೆಯಲ್ಲಿ ಯುಧಿಷ್ಠಿರಾದಿ ಸಕಲ ಪಾಂಡವರಿಗೆ ಸಲಹೆ ಸೂಚನೆಯನ್ನು ನೀಡುತ್ತಾ ಇದ್ದಾನೆ.
ಸಹಸ್ರಾರು ಜನರಿಗೆ ಅದ್ಧೂರಿ ಭೋಜನದ ಏರ್ಪಾಡು ಭೀಮಸೇನ ನೋಡಿಕೊಳ್ಳುತ್ತಿದ್ದಾನೆ. ಋಷಿಗಳು, ಧರ್ಮಿಷ್ಠ ನೃಪರು ಇನ್ನೂ ಅನೇಕ ಮಹಾ ಪುರುಷರು ಭೂರಿ ಭೋಜನವನ್ನು ಸವೆದು ಯುಧಿಷ್ಠಿರನನ್ನು ಹರೆಸುತ್ತಿದ್ದಾರೆ.
ಏಕಾಏಕಿ, ಅರೇ ಏನಿದು ಎಂದು ಎಲ್ಲರೂ ಆಶ್ಚರ್ಯಚಿಕಿತರಾಗುವಂತೆ ಜಗನ್ನಿಯಾಮಕ, ಕೇವಲ ಮನಸಿನಿಂದಲೇ ಸೃಷ್ಟಿ ಸ್ಥಿತಿ ಲಯ ಕಾರ್ಯಗಳನ್ನು ನಿಯಾಮಿಸುವ, ಸರ್ವೋತ್ತಮನಾದ ಶ್ರೀಕೃಷ್ಣ ಪರಮಾತ್ಮ ಅಲ್ಲಿದ್ದ ಉಂಡೆಲೆಗಳನ್ನು ಎತ್ತಲು ಪ್ರಾರಂಭಿಸಿದ.
ಊಹಿಸಿಕೊಂಡರೆ ಕಣ್ಣಾಲಿಗೆಯಲ್ಲಿ ನೀರು ಬರುತ್ತದೆ. ಒಂದು ಸಣ್ಣ ಹುದ್ದೆಯಲ್ಲಿದ್ದರೇ ಈ ರೀತಿಯ ಸಣ್ಣ ಸಣ್ಣ ಕೆಲಸವನ್ನು ಮಾಡಲು ಹಿಂಜರಿಯುವ ನಮಗೆ ಶ್ರೀಕೃಷ್ಣ ಕಲಿಸಿದ ಮಹಾ ಪಾಠ. ಸರ್ವೋತ್ತಮನಾದರೂ ಮುಂಬರುವ ನಮ್ಮಂಥಾ ಪಾಮರರಿಗೆ ಬುದ್ಧಿಕಲಿಸಲೆಂದೇ ಎಂಜಲವನು ಬಳೆದನೇನೋ ಎಂಬಂತಿದೆ.
ಈ ಅದ್ಭುತ ಸನ್ನಿವೇಶವನ್ನು ಪುರಂದರ ದಾಸರು ತಮ್ಮ ಸರಳ ಕನ್ನಡ ಸಾಹಿತ್ಯದ ಮೂಲಕ ನಮಗೆ ಕೊಟ್ಟಿದ್ದಾರೆ.
ರಾಜಿಸುವ ರಂಜಿಸುವ ರಾಜಸೂಯ ಯಾಗದಲ್ಲಿ
ಎಂಜಲವನೇ ಬಳೆದಾ ಶ್ರೀಹರಿ||ಪ||
ಉಟ್ಟ ಪೀತಾಂಬರ ಟೊಂಕಕೆ ಕಟ್ಟಿ
ಕಟ್ಟಿದ ಸರಗಳ ಹಿಂದಕೆ ಸರಿಸಿ
ಸರ ಸರ ಎಲೆಗಳ ತೆಗೆದು ಬಿಸಾಕಿದ
ಕಟ್ಟಕಡೆಗೆ ತಾನು ಬಳೆದು ನಿಂತ. ||೧||
ಪೊರಕೆಯ ಪಿಡಿದು ಕಸವನೆ ಗುಡಿಸಿ
ಸಗಣಿಯ ನೀರೊಳು ಕಲಿಸಿ ಥಳಿಹಾಕಿ
ಸಾಲುಸಾಲಾಗಿ ಮಣೆಯಿಟ್ಟು ಎಲೆ ಹಾಕಿ
ರಂಗೋಲಿ ಕೊಳವೆಯ ಎಳೆದು ತಾನಿಂತ. ||೨||
ಎನ್ನ ಕೆಲಸಾಯ್ತೆಂದ ಇನ್ನೇಕೆ ತಡವೆಂದ
ಇನ್ನೊಂದು ಪಂಕ್ತಿಯ ಕೂಡ ಹೇಳೆಂದ
ಘನ್ನ ಮಹಿಮ ಶ್ರೀ ಪುರಂದರ ವಿಠಲನು
ಪುಣ್ಯಾತ್ಮರುಂಡೆಲೆಗಳನು ತೆಗೆದು ನಿಂತ ||೩||
ದಾಸರು ವರ್ಣಿಸಿರುವುದನ್ನು ನೋಡಿ, ಹಾಗೇ ನಮ್ಮ ಕಣ್ಣಮುಂದೆ ಗೋಚರವಾಗುತ್ತದೆ. ಕೃಷ್ಣ ಪೀತಾಂಬರವನ್ನು ಟೊಂಕಕ್ಕೆ ಎತ್ತಿ ಕಟ್ಟಿ, ಎಲೆಗಳನೆತ್ತುತ್ತಾ, ಪೊರಕೆ ಹಿಡಿದು ಬಳೆದು, ಗೋಮಯವನ್ನು ಹಚ್ಚಿ ರಂಗೋಲಿ ಹಾಕುವುದು. ದಾಸರೆಂದರೆ ಪುರಂದರ ದಾಸರಯ್ಯಾ..
ಇದಕ್ಕೆ ಅಲ್ಲವೇ ಶ್ರೀಕೃಷ್ಣನನ್ನು ಜಗದ್ಗುರು ಎಂದು ಸಂಭೋದಿಸಿರುವುದು..
ಶ್ರೀ ಕೃಷ್ಣಂ ವಂದೇ ಜಗದ್ಗುರುಮ್||
PC:Google
'ಆಹಾ ರಾಮರಾಜ್ಯ' 'ಇಲ್ಲಿ ಬದುಕುವುದೇ ನಮ್ಮ ಪುಣ್ಯ'
ನೆರೆದಿದ್ದ ಜನರಿಂದ ಹೀಗೆ ಯುಧಿಷ್ಠಿರನ ಇಂದ್ರಪ್ರಸ್ಥದ ಬಗ್ಗೆ ಹೊಗಳಿಕೆ ಬರುತ್ತಿದ್ದರೆ, ಇತ್ತ ಮಹಾ ಧರ್ಮಿಷ್ಠ ಯುಧಿಷ್ಠಿರ ನೆರೆದಿದ್ದ ಜನರಿಗೆಲ್ಲಾ ದಾನ ಧರ್ಮಗಳನ್ನು ಮಾಡುತ್ತಾ, ರಾಜಸೂಯ ಯಾಗಕ್ಕೆ ಆಗಮಿಸಿದ್ದ ರಾಜರುಗಳಿಗೆ ಆತಿಥ್ಯವನ್ನು ನೀಡುತ್ತಾ, ಋಷಿಗಳ, ಯತಿಗಳ ಸೇವೆಯನ್ನು ಮಾಡುತ್ತಾ ಎಲ್ಲರ ಬಾಯಲ್ಲಿ ಆಶಿರ್ವಾದವನ್ನು ಪಡೆಯುತ್ತಾ ಅಭೂತಪೂರ್ವ ರಾಜಸೂಯ ಯಾಗವನ್ನು ನಡೆಸುತ್ತಿದ್ದಾನೆ.
ಇದನ್ನೆಲ್ಲವನ್ನು ನೋಡುತ್ತಾ ಇದ್ದ ಶ್ರೀಕೃಷ್ಣ ಪರಮಾತ್ಮ ತಾನು ಸದಾ ಧರ್ಮಿಗಳ ಪರ ಎಂದು ಪದೇ ಪದೇ ನಿರೂಪಿಸುತ್ತಿರುವುನೇನೋ ಎಂಬಂತೆ ತನ್ನ ತಂಗಿಯ ಮನೆಯಲ್ಲಿ ಯುಧಿಷ್ಠಿರಾದಿ ಸಕಲ ಪಾಂಡವರಿಗೆ ಸಲಹೆ ಸೂಚನೆಯನ್ನು ನೀಡುತ್ತಾ ಇದ್ದಾನೆ.
ಸಹಸ್ರಾರು ಜನರಿಗೆ ಅದ್ಧೂರಿ ಭೋಜನದ ಏರ್ಪಾಡು ಭೀಮಸೇನ ನೋಡಿಕೊಳ್ಳುತ್ತಿದ್ದಾನೆ. ಋಷಿಗಳು, ಧರ್ಮಿಷ್ಠ ನೃಪರು ಇನ್ನೂ ಅನೇಕ ಮಹಾ ಪುರುಷರು ಭೂರಿ ಭೋಜನವನ್ನು ಸವೆದು ಯುಧಿಷ್ಠಿರನನ್ನು ಹರೆಸುತ್ತಿದ್ದಾರೆ.
ಏಕಾಏಕಿ, ಅರೇ ಏನಿದು ಎಂದು ಎಲ್ಲರೂ ಆಶ್ಚರ್ಯಚಿಕಿತರಾಗುವಂತೆ ಜಗನ್ನಿಯಾಮಕ, ಕೇವಲ ಮನಸಿನಿಂದಲೇ ಸೃಷ್ಟಿ ಸ್ಥಿತಿ ಲಯ ಕಾರ್ಯಗಳನ್ನು ನಿಯಾಮಿಸುವ, ಸರ್ವೋತ್ತಮನಾದ ಶ್ರೀಕೃಷ್ಣ ಪರಮಾತ್ಮ ಅಲ್ಲಿದ್ದ ಉಂಡೆಲೆಗಳನ್ನು ಎತ್ತಲು ಪ್ರಾರಂಭಿಸಿದ.
ಊಹಿಸಿಕೊಂಡರೆ ಕಣ್ಣಾಲಿಗೆಯಲ್ಲಿ ನೀರು ಬರುತ್ತದೆ. ಒಂದು ಸಣ್ಣ ಹುದ್ದೆಯಲ್ಲಿದ್ದರೇ ಈ ರೀತಿಯ ಸಣ್ಣ ಸಣ್ಣ ಕೆಲಸವನ್ನು ಮಾಡಲು ಹಿಂಜರಿಯುವ ನಮಗೆ ಶ್ರೀಕೃಷ್ಣ ಕಲಿಸಿದ ಮಹಾ ಪಾಠ. ಸರ್ವೋತ್ತಮನಾದರೂ ಮುಂಬರುವ ನಮ್ಮಂಥಾ ಪಾಮರರಿಗೆ ಬುದ್ಧಿಕಲಿಸಲೆಂದೇ ಎಂಜಲವನು ಬಳೆದನೇನೋ ಎಂಬಂತಿದೆ.
ಈ ಅದ್ಭುತ ಸನ್ನಿವೇಶವನ್ನು ಪುರಂದರ ದಾಸರು ತಮ್ಮ ಸರಳ ಕನ್ನಡ ಸಾಹಿತ್ಯದ ಮೂಲಕ ನಮಗೆ ಕೊಟ್ಟಿದ್ದಾರೆ.
ರಾಜಿಸುವ ರಂಜಿಸುವ ರಾಜಸೂಯ ಯಾಗದಲ್ಲಿ
ಎಂಜಲವನೇ ಬಳೆದಾ ಶ್ರೀಹರಿ||ಪ||
ಉಟ್ಟ ಪೀತಾಂಬರ ಟೊಂಕಕೆ ಕಟ್ಟಿ
ಕಟ್ಟಿದ ಸರಗಳ ಹಿಂದಕೆ ಸರಿಸಿ
ಸರ ಸರ ಎಲೆಗಳ ತೆಗೆದು ಬಿಸಾಕಿದ
ಕಟ್ಟಕಡೆಗೆ ತಾನು ಬಳೆದು ನಿಂತ. ||೧||
ಪೊರಕೆಯ ಪಿಡಿದು ಕಸವನೆ ಗುಡಿಸಿ
ಸಗಣಿಯ ನೀರೊಳು ಕಲಿಸಿ ಥಳಿಹಾಕಿ
ಸಾಲುಸಾಲಾಗಿ ಮಣೆಯಿಟ್ಟು ಎಲೆ ಹಾಕಿ
ರಂಗೋಲಿ ಕೊಳವೆಯ ಎಳೆದು ತಾನಿಂತ. ||೨||
ಎನ್ನ ಕೆಲಸಾಯ್ತೆಂದ ಇನ್ನೇಕೆ ತಡವೆಂದ
ಇನ್ನೊಂದು ಪಂಕ್ತಿಯ ಕೂಡ ಹೇಳೆಂದ
ಘನ್ನ ಮಹಿಮ ಶ್ರೀ ಪುರಂದರ ವಿಠಲನು
ಪುಣ್ಯಾತ್ಮರುಂಡೆಲೆಗಳನು ತೆಗೆದು ನಿಂತ ||೩||
ದಾಸರು ವರ್ಣಿಸಿರುವುದನ್ನು ನೋಡಿ, ಹಾಗೇ ನಮ್ಮ ಕಣ್ಣಮುಂದೆ ಗೋಚರವಾಗುತ್ತದೆ. ಕೃಷ್ಣ ಪೀತಾಂಬರವನ್ನು ಟೊಂಕಕ್ಕೆ ಎತ್ತಿ ಕಟ್ಟಿ, ಎಲೆಗಳನೆತ್ತುತ್ತಾ, ಪೊರಕೆ ಹಿಡಿದು ಬಳೆದು, ಗೋಮಯವನ್ನು ಹಚ್ಚಿ ರಂಗೋಲಿ ಹಾಕುವುದು. ದಾಸರೆಂದರೆ ಪುರಂದರ ದಾಸರಯ್ಯಾ..
ಇದಕ್ಕೆ ಅಲ್ಲವೇ ಶ್ರೀಕೃಷ್ಣನನ್ನು ಜಗದ್ಗುರು ಎಂದು ಸಂಭೋದಿಸಿರುವುದು..
ಶ್ರೀ ಕೃಷ್ಣಂ ವಂದೇ ಜಗದ್ಗುರುಮ್||
PC:Google